Advertisement

ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ : ಸಚಿವ ವಿ ಸೋಮಣ್ಣ

02:03 PM Jun 09, 2021 | Team Udayavani |

ಚಿತ್ರದುರ್ಗ :  ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ರಾಜ್ಯಾಧ್ಯಕ್ಷ ಕಟೀಲ್ ಹೇಳಿದ್ದಾರೆ. ನಾವು ಅನೇಕ ಸಲ ಹೇಳಿದ್ದೇವೆ ಗೊಂದಲ ಮಾಡುವುದು ಬೇಡ ಎಂದು. ರಾಜ್ಯ , ರಾಷ್ಟ್ರದ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಕರ್ನಾಟಕ ರಾಜ್ಯವಂತೂ ಕೋವಿಡ್ ನಿಂದ ತತ್ತರಿಸಿದೆ ಎಂದು ಚಿತ್ರದುರ್ಗ ನಗರದಲ್ಲಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

Advertisement

ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದ ಕೋವಿಡ್ ಸೋಂಕು ಹತೋಟಿಗೆ ಬಂದಿದೆ. ಸೋಂಕು ತೊಲಗಿಸಿ ಜನರಲ್ಲಿ ನೆಮ್ಮದಿ ತರುವುದು ನಮ್ಮ ಆದ್ಯತೆ.

ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಬಿಜೆಪಿ ಹೈಕಮಾಂಡ್ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಸಿಎಂ ಸ್ಥಾನ ಬದಲಾವಣೆ ವಿಚಾರ ಬಗ್ಗೆ ಮಾತಾಡದಂತೆ ಸೂಚಿಸಿದ್ದಾರೆ ಎಂದು ಸೋಮಣ್ಣ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next