Advertisement

ಡಿ.ಕೆ.ಶಿವಕುಮಾರ್‌ ಜತೆ ಭಿನ್ನಾಭಿಪ್ರಾಯವಿಲ್ಲ

07:10 AM Jul 04, 2020 | Lakshmi GovindaRaj |

ಬೆಂಗಳೂರು: ಡಿ.ಕೆ.ಶಿವಕುಮಾರ್‌ ಅವರನ್ನು ಮನೆಯಲ್ಲಿ ಭೇಟಿ ಮಾಡಿರುವುದಕ್ಕೆ ಯಾವುದೇ ವಿಶೇಷ ಇಲ್ಲ. ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.  ಶುಕ್ರವಾರ ಸದಾಶಿವ ನಗರದ ಪಕ್ಷದ ಅಧ್ಯಕ್ಷರ ಮನೆಗೆ ತೆರಳಿ ಮಾತುಕತೆ ನಡೆಸಿದ ಸತೀಶ್‌ ಜಾರಕಿಹೊಳಿ, ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿರುವುದು ಅಚ್ಚರಿಯ ಭೇಟಿಯಲ್ಲ. ಅವರು ನಮ್ಮ ಅಧ್ಯಕ್ಷರು, ನಾವು ಸೆಕೆಂಡ್‌  ಲೆμrನೆಂಟ್‌ಗಳು. ಪಕ್ಷ ಸಂಘಟನೆ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದರು.

Advertisement

ಇದುವರೆಗೂ ಅವರ ಮನೆಗೆ ಭೇಟಿ ನೀಡದಿರಬಹುದು. ಆದರೆ, ಕಾಂಗ್ರೆಸ್‌ ಕಚೇರಿಯಲ್ಲಿ ಭೇಟಿಯಾಗಿ ಸಾಕಷ್ಟು ಬಾರಿ ಸಭೆಗಳನ್ನೂ ನಡೆಸಿದ್ದೇವೆ ಎಂದು ಹೇಳಿದರು. ಈಗಾಗಲೇ ಆರು ಜಿಲ್ಲೆಗಳ ಪ್ರವಾಸ ಮುಗಿಸಿದ್ದೇನೆ.  ಬೇರೆ ಭಾಗಗಳಿಗೂ ಹೋಗುತ್ತೇನೆ. ಬೇರೆ ಪಕ್ಷದ ನಾಯಕರನ್ನ ವಾಪಸ್‌ ಕರೆತರುವ ವಿಚಾರದಲ್ಲಿ ಸಮಿತಿ ರಚನೆಯಾಗಿದೆ. ಸಮಿತಿ ವರದಿ ನೀಡಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next