Advertisement

ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸ್ಪಷ್ಟನೆ

11:42 PM Apr 05, 2020 | Sriram |

ಬೆಂಗಳೂರು: ಒಂದೆಡೆಯಿಂದ ರಾಜ್ಯ ಕೋವಿಡ್ 19 ವೈರಸ್‌ನಿಂದ ಮುಕ್ತಿ ಪಡೆಯಲು ಹೋರಾಟ ನಡೆಸುತ್ತಿದ್ದರೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ|ಕೆ.ಸುಧಾಕರ್‌ ನಡುವಣ ಮುಸುಕಿನ ಗುದ್ದಾಟ ತೀವ್ರಗೊಂಡಿದೆ ಎಂಬ ವರದಿಗಳ ನಡುವೆಯೇ ಇವರೀರ್ವರೂ ನಮ್ಮ ನಡುವೆ ಯಾವುದೇ ಪ್ರತಿಷ್ಠೆ ಅಥವಾ ವೈಮನಸ್ಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

ಕೋವಿಡ್ 19 ವೈರಸ್‌ ನಿಯಂತ್ರಣ ಕಾರ್ಯದಲ್ಲಿ ತಮ್ಮ ಮತ್ತು ಸಚಿವ ಡಾ| ಸುಧಾಕರ್‌ ಮಧ್ಯೆ ಪ್ರತಿಷ್ಠೆ ಇಲ್ಲ ಎಂದು ಪುನರುಚ್ಚರಿಸಿರುವ ಬಿ. ಶ್ರೀರಾಮುಲು, ಇಂಥ ಸಂಕಷ್ಟದ ಸಂದರ್ಭದಲ್ಲಿ ಕಿತ್ತಾಡಲು ನಮಗೇನು ಹುಚ್ಚೇ ಎಂದು ಪ್ರಶ್ನಿಸಿದ್ದಾರೆ. ಸಚಿವ ಡಾ| ಸುಧಾಕರ್‌ ನನ್ನ ಸಹೋದರರಿದ್ದಂತೆ. ನಮ್ಮಿಬ್ಬರ ನಡುವೆ ವೈಮನಸ್ಸಿದೆ ಎಂಬುದು ವದಂತಿ. ಇಂಥ ಆಧಾರರಹಿತ ಸುದ್ದಿಗಳಿಗೆ ಕಿವಿಗೊಡದೆ ನಾವು ಬಡವರ ಸೇವೆ ಮಾಡಲಿದ್ದೇವೆ. ಸರಕಾರದ ಕೆಲಸ ದೇವರ ಕೆಲಸ ಎಂದರು.

ನನ್ನ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೋವಿಡ್ 19 ವಿರುದ್ಧ ಟೊಂಕಕಟ್ಟಿ ಹೋರಾಡುತ್ತಿದ್ದೇವೆ. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇವೆ. ನಾನು ಬಿ. ಶ್ರೀರಾಮುಲು ಅಣ್ಣತಮ್ಮಂದಿರಿದ್ದಂತೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ನಾವು ಸಣ್ಣ ಮಕ್ಕಳಲ್ಲ. ನಮ್ಮದೇ ಆದ ಜವಾ ಬ್ದಾರಿಗಳಿವೆ ಎಂದು ಡಾ|ಕೆ.ಸುಧಾಕರ್‌ ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next