Advertisement
ಈ ಹಿನ್ನೆಲೆಯಲ್ಲಿ “ಉದಯವಾಣಿ’ಯು ಬುಧವಾರ ನಗರದ ಹಲವು ಕಡೆ ರಿಯಾಲಿಟಿ ಚೆಕ್ ನಡೆಸಿದ್ದು, ಬಹುತೇಕ ಎಟಿಎಂಗಳಲ್ಲಿ ನಗದು ಲಭ್ಯವಾಗುತ್ತಿದೆ.
Related Articles
Advertisement
ಜನಸಾಮಾನ್ಯರಿಗೆ ತುರ್ತು ಹಣ ಪಡೆಯಲು ಯಾವುದೇ ಸಮಸ್ಯೆ ಉಂಟಾಗಿಲ್ಲ’ ಎಂದು ಕಂಕನಾಡಿ ಕಾರ್ಪೊರೇಶನ್ ಬ್ಯಾಂಕಿನ ಎಟಿಎಂನ ಭದ್ರತಾ ಸಿಬಂದಿ ತಿಳಿಸಿದ್ದಾರೆ.
ಬ್ಯಾಂಕ್ ರಜೆಯಿಂದಾಗಿ ಹಣ ಇಲ್ಲಮಿಲಾಗ್ರಿಸ್ ಬಳಿಯ ಒಂದು ಎಟಿಎಂ ಕೇಂದ್ರದಲ್ಲಿ ಬೆಳಗ್ಗೆ ಹಣ ಇದ್ದು ಬಳಿಕ ಖಾಲಿಯಾಗಿದ್ದರಿಂದ ಗ್ರಾಹಕರು ವಾಪಾಸ್ ಹೋಗುತ್ತಿದ್ದರು. ಆದರೆ ಬುಧವಾರ ಬ್ಯಾಂಕ್ಗೆ ರಜೆ ಇದ್ದ ಕಾರಣ ಎಟಿಎಂ ಯಂತ್ರಕ್ಕೆ ಹಣ ತುಂಬಿಸಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಹೀಗಾಗಿದೆ ಎಂದು ಅಲ್ಲಿನ ಸಿಬಂದಿ ತಿಳಿಸಿದ್ದಾರೆ. ಪಿವಿಎಸ್ ಬಳಿಯ ಎಟಿಎಂ ಕೇಂದ್ರವೊಂದರಲ್ಲಿ ಯಂತ್ರ ನಿರ್ವಹಣೆಯಲ್ಲಿರುವುದರಿಂದ ಸೇವೆ ಲಭ್ಯವಾಗಿರಲಿಲ್ಲ. ಸಹಜ ಸ್ಥಿತಿಯಲ್ಲಿ
ರಿಯಾಲಿಟಿ ಚೆಕ್ನಲ್ಲಿ ನಗರದ ಒಂದೆರಡು ಎಟಿಎಂ ಕೇಂದ್ರಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಕೇಂದ್ರಗಳಲ್ಲಿ ನಗದು ಲಭ್ಯವಿರುವುದು ಕಂಡುಬಂತು. ಎಲ್ಲೆಡೆಯೂ ಗ್ರಾಹಕರು ಕೂಡ ಆರಾಮವಾಗಿಯೇ ನಗದು ಡ್ರಾ ಮಾಡುತ್ತಿದ್ದು, ಎಲ್ಲಿಯೂ ಎಟಿಎಂಗಳ ಮುಂದೆ ಹಣಕ್ಕಾಗಿ ಜನ ಸಾಲುಗಟ್ಟಿ ನಿಲ್ಲುವ ದೃಶ್ಯಗಳು ಕೂಡ ಕಂಡುಬಂದಿಲ್ಲ. ಇದರಿಂದಾಗಿ, ನಗರದ ಸಾರ್ವಜನಿಕರಿಗೆ ಹಣಕಾಸಿನ ಅಗತ್ಯಕ್ಕೆ ಯಾವುದೇ ಅಡಚಣೆಯಾಗಿಲ್ಲ. ಎಲ್ಲೆಡೆಯೂ ಹಣಕಾಸಿನ ಲಭ್ಯತೆ ಸಹಜ ಸ್ಥಿತಿಯಲ್ಲಿದೆ. ಹಣದ ಕೊರತೆಯಾಗದಂತೆ ಎಚ್ಚರ
ಮಂಗಳೂರಿನ ಎಲ್ಲ ಬ್ಯಾಂಕ್ಗಳಲ್ಲಿಯೂ ಗ್ರಾಹಕರಿಗೆ ನಗದು ಲಭ್ಯವಾಗುವ ನಿಟ್ಟಿನಲ್ಲಿ ಬ್ಯಾಂಕ್ಗಳು ಎಚ್ಚರ ವಹಿಸಿವೆ. ನಗರದ ಯಾವುದೇ ಬ್ಯಾಂಕಿನ ಎಟಿಎಂ ಕೇಂದ್ರಗಳಲ್ಲಿ ಹಣದ ಕೊರತೆಯಾಗಿರುವ ಬಗ್ಗೆ ಗ್ರಾಹಕರಿಂದ ದೂರುಗಳು ಬಂದಿಲ್ಲ.
– ರಾಘವ ಯಜಮಾನ್ಯ, ಜಿಲ್ಲೆಯ ಲೀಡ್ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕಿನ ಮ್ಯಾನೇಜರ್. ಆತಂಕದಿಂದಲೇ ಬಂದಿದ್ದೆ
ದೊಡ್ಡ ಮಟ್ಟದ ಖರೀದಿಗೆಲ್ಲ ಸ್ಪೈಪ್ ಮಾಡಬಹುದಾದರೂ ಸಣ್ಣ ಸಣ್ಣ ವಸ್ತುಗಳಿಗೆ ನಗದು ಅಗತ್ಯ. ಆದರೆ ಎಟಿಎಂನಲ್ಲಿ ಯಾವಾಗ ಬೇಕಾದರೂ ಡ್ರಾ ಮಾಡಬಹುದಾದ್ದರಿಂದ ಕೈಯಲ್ಲಿ ಹಣ ಇಟ್ಟುಕೊಳ್ಳುವುದೇ ಕಡಿಮೆ. ಇವತ್ತೂ ಹಣ ಅಗತ್ಯವಾಗಿ ಬೇಕಿತ್ತು. ಆದರೆ ಕೆಲವೆಡೆ ಎಟಿಎಂಗಳಲ್ಲಿ ನಗದು ಇಲ್ಲ ಎಂಬುದಾಗಿ ಪತ್ರಿಕೆಗಳಲ್ಲಿ ಓದಿದ್ದೆ. ಹಣ ಇದೆಯೋ ಇಲ್ಲವೋ ಎಂಬ ಆತಂಕದಲ್ಲೇ ಬಂದಿದ್ದೆ. ಆದರೆ ಇದೀಗ ಹಣ ಇರುವುದು ಖುಷಿಯಾಯಿತು.
- ಮಧುರಾ ಶಕ್ತಿನಗರ, ಗ್ರಾಹಕಿ – ಧನ್ಯಾ ಬಾಳೆಕಜೆ