Advertisement
ಇಂತಹ ಪುಣ್ಯಪುರುಷರ ವೇಷ ಹಾಕುವ ಮೂಲಕ ಆತ್ಮಶಕ್ತಿ ಉದ್ದೀಪನಗೊಳಿಸಲು ಸಾಧ್ಯವಾಗುತ್ತದೆ. ಅವರ ಜನ್ಮ ಉತ್ಸವದ ಆಚರಣೆಯಲ್ಲಿ ಬದುಕನ್ನು ರೂಪಿಸುವ ದಾರಿಯೂ ಇದೆ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.ಅವರು ರವಿವಾರ ಒಡಿಯೂರು ಶ್ರೀ ಸಂಸ್ಥಾನದಲ್ಲಿ ಆಯೋಜಿಸಿದ್ದ ಮುದ್ದುಕೃಷ್ಣ ವೇಷಸ್ಪರ್ಧೆಯ ಬಹುಮಾನ ವಿತರಿಸಿ ಆಶೀರ್ವಚನ ನೀಡಿದರು.
ಶ್ರೀಕೃಷ್ಣನ ತತ್ವ ಅನುಸರಿಸುವ ಮೂಲಕ ನಾವೆಲ್ಲರೂ ಅಮೃತಪುತ್ರರಾಗೋಣ. ಆದರ್ಶ ಮಕ್ಕಳನ್ನು ಬೆಳೆಯುವಂತೆ ಮಾಡುವುದರೊಂದಿಗೆ ಭವ್ಯ ಭಾರತವನ್ನು ನಿರ್ಮಿಸುವಲ್ಲಿ ತಾಯಂದಿರ ಪಾತ್ರ ಮಹತ್ತರವಾದುದು. ಅನುಸಂಧಾನ ಸಾಧ್ಯ
ಕಲಿಯುಗ ಎಂದರೆ ಕಲಿಯುವ ಯುಗವೂ ಹೌದು. ಈ ಯುಗದಲ್ಲಿ ನಾಮಸಂಕೀರ್ತನೆಯಿಂದ ಭಗವಂತನ ಅನುಸಂಧಾನ ಸಾಧ್ಯ ಎಂದು ಅವರು ಹೇಳಿದರು. ಸಾಧ್ವಿà ಶ್ರೀ ಮಾತಾನಂದಮಯೀಯವರು ಸ್ಪರ್ಧೆಗೆ ಚಾಲನೆ ನೀಡಿದರು.
Related Articles
Advertisement