Advertisement
ಒಂದು ಪ್ರಾದೇಶಿಕ ಕಚೇರಿ ಇರುವ ಕಾರಣಕ್ಕೆ ಕಾರ್ಯಭಾರ ಹಾಗೂ ಜನರಿಗೆ ಸಾಕಷ್ಟು ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಹುಬ್ಬಳ್ಳಿ ಪೂರ್ವ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಆರಂಭಿಸಿ ಅಪ್ಪಯ್ಯ ನಾಲತ್ವಾಡಮಠ ಅವರನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನಾಗಿ ಸರಕಾರ ನಿಯೋಜಿಸಿತ್ತು. ಆದರೆ ಇವರು ಇಲ್ಲಿ ಬಹಳ ದಿನ ಉಳಿಯಲಿಲ್ಲ. ಇವರ ವರ್ಗಾವಣೆ ನಂತರ ಈ ಕಚೇರಿಯ ಕಾರ್ಯಭಾರವನ್ನು ಧಾರವಾಡದ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೊರಳಿಗೆ ಹಾಕಲಾಯಿತು. ಇದು ಸರಕಾರದ ನಿರ್ಲಕ್ಷವೋ ಅಥವಾ ಪ್ರಭಾವಿಗಳ ಕೈವಾಡವೋ ಅಥವಾ ಎಲ್ಲಾ ಹುದ್ದೆಗಳನ್ನು ಒಬ್ಬರೇ ನಿಭಾಯಿಸಬಲ್ಲರು ಎಂಬ ವಿಶ್ವಾಸವೋ ಗೊತ್ತಿಲ್ಲ.
Related Articles
ಸಾರಿಗೆ ಇಲಾಖೆಯಿಂದ ಅಧಿಕಾರಿಗಳ ಹುದ್ದೆಗಳಷ್ಟೇ ಅಲ್ಲ. ಕೆಳಹಂತದ ಹುದ್ದೆಗಳು ಸಾಕಷ್ಟು ಪ್ರಮಾಣದಲ್ಲಿ ಖಾಲಿಯಿವೆ. ಹೀಗಾಗಿಯೇ ಕಚೇರಿ ಗುಮಾಸ್ತ ಮಾಡುವ ಬಹುತೇಕ ಕೆಲಸಗಳನ್ನು ಏಜೆಂಟರೇ ಮಾಡುತ್ತಾರೆ. ಸಿಬ್ಬಂದಿ ಕೊರತೆಯಿಂದ ಸಾರಿಗೆ ಇಲಾಖೆ ಎನ್ನುವುದು ಕೇವಲ ಪರವಾನಗಿ ನೀಡುವ ಕಚೇರಿಯಾಗಿ ಮಾರ್ಪಟ್ಟಿದೆ. ರಸ್ತೆಗಳಿದು ಮಾಡಬೇಕಾದ ಕಾರ್ಯಗಳಾವುವೂ ಸಾರಿಗೆ ಇಲಾಖೆಯಿಂದ ಆಗುತ್ತಿಲ್ಲ. ಇವರ ಕೆಲಸಗಳನ್ನು ಸಂಚಾರಿ ಪೊಲೀಸರೇ ನಿರ್ವಹಿಸುತ್ತಿರುವುದು ವಿಪರ್ಯಾಸ.
Advertisement
ಹೆಚ್ಚಿದೆ ಕೆಲಸದೊತ್ತಡ ಪ್ರಾದೇಶಿಕ ಸಾರಿಗೆ ಅಧಿಕಾರಿ ಹುದ್ದೆ ಕಾರ್ಯ ವ್ಯಾಪ್ತಿ ದೊಡ್ಡದಿದೆ. ರಜಿಸ್ಟರಿಂಗ್ ಪ್ರಾಧಿಕಾರ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಾರ್ಯದರ್ಶಿ, ತೆರಿಗೆ ಪ್ರಾಧಿಕಾರ, ಪರವಾನಗಿ ಪ್ರಾಧಿಕಾರ, ಚಾಲನಾ ತರಬೇತಿ ಶಾಲೆಗಳಿಗೆ ಪರವಾನಗಿ, ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ಸೇರಿದಂತೆ ಹಲವು ಕಾರ್ಯಗಳನ್ನು ನಿಭಾಯಿಸಬೇಕು. ಅಪಘಾತವಾದ ವಾಹನಗಳನ್ನು ಆರ್ಟಿಒ ಹಾಗೂ ಎಆರ್ಟಿಒ ಪರಿಶೀಲಿಸಬೇಕು. ಸಾರಿಗೆ ಇಲಾಖೆಗೆ ಸಂಬಂಧಿಸಿದ ಸಭೆಗಳಿಗೆ ಹಾಜರಾಗಬೇಕು. ಕುಂದಗೋಳ, ನವಲಗುಂದ ಹಾಗೂ ಕಲಘಟಗಿ ತಾಲೂಕು ಕೇಂದ್ರಗಳಲ್ಲಿ ಸಾರಿಗೆ ಇಲಾಖೆಯಿಂದ ಶಿಬಿರಗಳನ್ನು ನಡೆಸಬೇಕು. ಉಪ ಸಾರಿಗೆ ಆಯುಕ್ತ ಮೇಲ್ಮನವಿ ಪ್ರಾಧಿಕಾರ, ಪರಿಶೀಲನೆ ಹಾಗೂ ಸಂಬಂಧಿಸಿದ ವಿಭಾಗದ ಬಿಲ್ಗಳನ್ನು ಅಂಗೀಕರಿಸುವುದು ಸೇರಿದಂತೆ ಇತರೆ ಕಾರ್ಯಭಾರವಿದೆ. ಇವೆಲ್ಲವನ್ನು ಓರ್ವ ಅಧಿಕಾರಿ ಸಕಾಲದಲ್ಲಿ ನಿರ್ವಹಿಸಿ ಜನರಿಗೆ ಸೂಕ್ತ ಸೇವೆ ನೀಡಲು ಸಾಧ್ಯವೇ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಆಡಳಿತಾತ್ಮಕವಾಗಿ ಸರಕಾರ ಹೆಚ್ಚುವರಿ ನೀಡಿರುವ ಹೊಣೆಗಾರಿಕೆಯನ್ನು ಒಬ್ಬ ಅಧಿಕಾರಿಯಾಗಿ ನಿಭಾಯಿಸುತ್ತಿದ್ದೇವೆ. ಈ ವಿಚಾರದಲ್ಲಿ ಏನೇ ಕೇಳುವುದಿದ್ದರೂ ಸರಕಾರವನ್ನು ಕೇಳಿ. ವೈಯಕ್ತಿಕವಾಗಿ ನನಗೆ ತೊಂದರೆಯಾಗುತ್ತಿದ್ದರೂ ಜನರಿಗೆ ಯಾವುದೇ ಸಮಸ್ಯೆಯಾಗದಂತೆ, ಇಲಾಖೆಯಿಂದ ದೊರೆಯುವ ಯಾವುದೇ ಸೇವೆ ವಿಳಂಬವಾಗದಂತೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನೆ.
ರವೀಂದ್ರ ಕವಲಿ,ಉಪ ಸಾರಿಗೆ ಆಯುಕ್ತ
ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ನಮ್ಮ ಸಂಘದ ಸದಸ್ಯರಿಂದ ಹಿಡಿದು ಸಾಮಾನ್ಯ ಜನರಿಗೆ ಸಕಾಲದಲ್ಲಿ ಸರಕಾರಿ ಶುಲ್ಕದಲ್ಲಿ ಸೇವೆ ಸಾರಿಗೆ ಇಲಾಖೆಯಿಂದ ಸಿಗುತ್ತಿಲ್ಲ. ಇದನ್ನು ನಿರೀಕ್ಷೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಯಲ್ಲಿ ಅಧಿಕಾರಿಗಳ ಹುದ್ದೆಗಳನ್ನೇ ತುಂಬಿಲ್ಲ. ಎರಡು ಕಚೇರಿಯನ್ನು ಒಬ್ಬ ಅಧಿಕಾರಿ ನಿಭಾಯಿಸಲು ಸಾಧ್ಯವಿಲ್ಲ. ಎಲ್ಲರ ಬಳಿಯೂ ನಮ್ಮ ಸಮಸ್ಯೆ ಹೇಳಿಕೊಂಡಿದ್ದೇವೆ. ಪ್ರತಿಭಟನೆಯೇ ಅಂತಿಮ ಎನ್ನುವಂತಾಗಿದೆ.
ಗೈಬುಸಾಬ ಹೊನ್ಯಾಳ,
ಅಧ್ಯಕ್ಷ, ಉ-ಕ ಲಾರಿ ಮಾಲೀಕರ ಸಂಘ ಹೇಮರಡ್ಡಿ ಸೈದಾಪುರ