Advertisement

ಕಿಡ್ನಿ ವೈಫಲ್ಯಕ್ಕೆ ತುತ್ತಾಗಿರುವ ಜೀವಕ್ಕೆ ಬೇಕಿದೆ ನೆರವು

11:44 AM Feb 23, 2017 | |

ಕಾರ್ಕಳ: ತಾಲೂಕಿನ ನಂದಳಿಕೆ ಗ್ರಾಮದ ಮಾವಿನಕಟ್ಟೆ ನಿವಾಸಿ ಮುರುಗೇಶ(48) ಕಿಡ್ನಿವೈಫಲ್ಯದಿಂದ ಬಳಲುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆಯಿಂದ ಬಳಲುತ್ತಿರುವ ಮುರುಗೇಶ ಅವರು ಆರ್ಥಿಕ ಸಮಸ್ಯೆಯಿಂದಲೂ ಜರ್ಜರಿತರಾಗಿದ್ದು ಇವರಿಗೆ ಹಣಕಾಸಿನ ನೆರವಿನ ಅಗತ್ಯವಿದೆ.

Advertisement

ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಮುರುಗೇಶ ವಾರಕ್ಕೆ ಎರಡು ಬಾರಿ ಡಯಾಲೀಸ್‌ ಮಾಡಬೇಕಾಗಿದೆ. ಇದರಿಂದ ಭಾರೀ ತೊಂದರೆಗೀಡಾಗಿದ್ದಾರೆ.  ವಯೊವೃದ್ಧರಾದ ಹೆತ್ತವರು ಹಾಗೂ ಪತ್ನಿ, ಮೂವರು ಮಕ್ಕಳು ಇವರನ್ನೇ ಆಶ್ರಯಿಸಿಕೊಂಡು ಬದುಕುತ್ತಿದ್ದರು. ಆದರೆ ಪ್ರಸ್ತುತ ಈ ಕುಟುಂಬ ಒಂದೊತ್ತು ಊಟಕ್ಕೂ ಪರದಾಡುತ್ತಿದೆ.

ಈಗಾಗಲೇ ಸಾಲ ಮಾಡಿ ಸೋತು ಹೋದ ಈ ಕುಟುಂಬಕ್ಕೆ ನೆರವು ನೀಡುವ ದಾನಿಗಳ ಸಹಕಾರ ಬೇಕಾಗಿದೆ. ವಾರಕ್ಕೆ ಕನಿಷ್ಠ 5 ಸಾವಿರ ರೂ. ಡಯಾಲಿಸ್‌ಗೆ ಬೇಕಾಗಿದ್ದು, ಹಣ ಹೊಂದಾಣಿಕೆ ಮಾಡಲಾಗದೇ ಈ ಕುಟುಂಬ ದಾರಿ ಕಾಣದಾಗಿದೆ. ಈ ಜೀವಕ್ಕೆ ಸಹಕರಿಸಿ ಇವರ ಈ ಕುಟುಂಬಕ್ಕೆ ನೆರವಾಗುವ ದಾನಿಗಳಿದ್ದಲ್ಲಿ ಕಾರ್ಕಳ ತಾಲೂಕು ಬೆಳ್ಮಣ್ಣು ಕಾಪೋರೇಶನ್‌ ಬ್ಯಾಂಕಿನ
ಎಸ್‌ಬಿ ಖಾತೆ ನಂಬ್ರ 208102101000984 (ಐಎಫ್‌ಎಸ್‌ಸಿ ಕೋಡ್‌ ಸಿಒಆರ್‌ಪಿ0002081)ಗೆ ನೀಡಿ ಸಹಕರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next