Advertisement

ಮಾಧ್ಯಮದಲ್ಲಿ ಬಹಳಷ್ಟು ಎಡಬಿಡಂಗಿಗಳೇ: ಹೆಗಡೆ

07:00 AM Sep 12, 2017 | |

ಕುಮಟಾ: “ಮಾಧ್ಯಮ ಕ್ಷೇತ್ರದಲ್ಲಿ ಬಹಳಷ್ಟು ಎಡಬಿಡಂಗಿಗಳೇ ತುಂಬಿಕೊಂಡಿದ್ದಾರೆ. ಹೇಳಿದ್ದನ್ನು ಬರೆದುಕೊಳ್ಳುವ ಯೋಗ್ಯತೆಯೂ ಇಲ್ಲ ‘ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Advertisement

ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, “ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮ ಮಿತ್ರರು ಈತನಕ ಸಭ್ಯತೆಯ ಗೆರೆ ದಾಟಿಲ್ಲ. ಅವರನ್ನು ನಾನು ಅಭಿನಂದಿಸುತ್ತೇನೆ. ಆದರೆ ಹೊರಗಡೆ ಎಡಬಿಡಂಗಿಗಳೇ ತುಂಬಿಕೊಂಡಿದ್ದಾರೆ. ಅವರಿಗೆ ಅವರ ಅಕ್ಷರದ ಬೆಲೆಯೇನು ಎನ್ನುವುದೂ ಗೊತ್ತಿಲ್ಲ. ತಮ್ಮ ಬದುಕೇನು ಎನ್ನುವುದೂ ಗೊತ್ತಿಲ್ಲ. ಅಂಥವರೇ ಇಂದು ಮಾಧ್ಯಮದಲ್ಲಿ  ತುಂಬಿಕೊಂಡಿದ್ದಾರೆ. ಅಂಥವರಿಗೆ ನಾವೇನು ಮಾತಾಡಬೇಕು. ಏನು ಪ್ರಶ್ನೆ ಕೇಳಬೇಕು, ಹೇಗೆ ಬರೆಯಬೇಕು ಎಂಬುದು ಗೊತ್ತಿಲ್ಲ. ಹೇಳಿದ್ದನ್ನು ಬರೆದುಕೊಳ್ಳುವ ಯೋಗ್ಯತೆಯೂ ಇಲ್ಲ. ನನ್ನ ಮಾತು ತೀಕ್ಷ್ಣವಾದರೆ ಕ್ಷಮಿಸಿ ಬಿಡಿ, ನನ್ನ ಜಿಲ್ಲೆಯವರ ಬಗ್ಗೆ ಹೇಳುತ್ತಿಲ್ಲ, ಮೇಲ್ಗಡೆ ಇರುವಂಥ ಎಡಬಿಡಂಗಿಗಳ ಬಗ್ಗೆ ಹೇಳುತ್ತಿದ್ದೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next