Advertisement

ತೆಕ್ಕಟ್ಟೆ ಶ್ರೀರಾಮ ಭಜನ ಮಂದಿರ: ರಾಮನವಮಿ, ರಾವಣ ದಹನ

09:17 PM Apr 15, 2019 | sudhir |

ತೆಕ್ಕಟ್ಟೆ: ಶ್ರೀರಾಮ ಭಜನ ತಂಡ ತೆಕ್ಕಟ್ಟೆ ಇಲ್ಲಿನ ಭಜನೋತ್ಸವ 2019, 4ನೇ ವರ್ಷದ ಕುಣಿತ ಭಜನೆ ಸ್ಪರ್ಧೆ ಹಾಗೂ 43ನೇ ವರ್ಷದ ಶ್ರೀ ರಾಮನವಮಿಯ ಮಂಗಲೋತ್ಸವ ಪ್ರಯುಕ್ತ ರಾವಣ ದಹನವು ಎ. 14ರಂದು ಸಂಪ್ರದಾಯದಂತೆ ನಡೆಯಿತು.

Advertisement

ಶ್ರೀ ರಾಮನವಮಿಯನ್ನು ಕಳೆದ ಕಳೆದ 43 ವರ್ಷಗಳಿಂದಲೂ ತೆಕ್ಕಟ್ಟೆ ಶೇಷ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.

ರಾವಣ ದಹನ
ಶ್ರೀ ರಾಮನವಮಿಯ ಭಜನ ಮಂಗಲೋತ್ಸವದ ಬಳಿಕ ಸಂಪ್ರದಾಯ ದಂತೆ ರಾಮ, ಲಕ್ಷಣ, ಹನುಮಂತನ ವೇಷ ತೊಟ್ಟ ಪುಟಾಣಿಗಳು ಮೆರವಣೆಗೆಯ ಮೂಲಕ ಸಾಗಿ ಬಂದು, ಶ್ರೀರಾಮ ವೇಷಧಾರಿ ತನ್ನ ಬಾಣದಿಂದ ಹತ್ತು ತಲೆಯ ರಾವಣನ ಬೃಹತ್‌ ಪ್ರತಿಕೃತಿಯನ್ನು ದಹಿಸಿದರು.

ದುಷ್ಟ ಸಂಹಾರದ ಬಳಿಕ ನೆರೆದಿದ್ದ ಭಕ್ತರು ಬಣ್ಣಗಳನ್ನು ಎರಚಿ ಸಂಭ್ರಮ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next