Advertisement

ತೆಕ್ಕಟ್ಟೆ : ಕಾರಿಗೆ ಲಾರಿ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತ ಕಾರು; ಪ್ರಯಾಣಿಕರು ಪಾರು

10:55 AM Sep 19, 2020 | sudhir |

ತೆಕ್ಕಟ್ಟೆ : ಇಲ್ಲಿನ ರಾ.ಹೆ.66 ಶ್ರೀ ಗಣೇಶ್‌ ಸಿಲ್ಕ್ಸ್ ಸಮೀಪ ಚಲಿಸುತ್ತಿದ್ದ ಲಾರಿ ಐ 20 ಕಾರಿಗೆ ಢಿಕ್ಕಿಯಾದ ಪರಿಣಾಮ ಕಾರು ಡಿವೈಡರ್‌ ಏರಿ ನಿಂತು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಸೆ.19 ರಂದು ಸಂಭವಿಸಿದೆ.

Advertisement

ಘಟನೆ : ಕುಂದಾಪುರದಿಂದ ಸಾಲಿಗ್ರಾಮ ಶ್ರೀ ಆಂಜನೇಯ ದೇವಸ್ಥಾನಕ್ಕೆ ತೆರಳುತ್ತಿದ್ದ ಕುಂದಾಪುರದ ಪ್ರಸಿದ್ದ ವೈದ್ಯರೋರ್ವರ ಹುಂಡೈ ಐ 20 ಕಾರಿಗೆ ಅದೇ ಮಾರ್ಗದಲ್ಲಿ ಪಾಮ್‌ ಆಯಿಲ್‌ ತುಂಬಿಸಿಕೊಂಡು ಮಂಗಳೂರು ಕಡೆಗೆ ಸಾಗುತ್ತಿದ್ದ ಲಾರಿ ಢಿಕ್ಕಿಯಾದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಏರಿ ನಿಂತಿದೆ. ಅಪಘಾತದ ತೀವ್ರತೆಗೆ ಕಾರಿನ ಬಲಭಾಗಗಳು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಘಟನೆ ತಿಳಿಯುತ್ತಿದ್ದಂತೆ ಕೋಟ ಪೊಲೀಸ್‌ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

ಸಾರ್ವಜನಿಕರ ಸ್ಪಂದನೆ : ರಾ.ಹೆ.66 ರಲ್ಲಿ ಹುಂಡೈ ಐ 20 ಕಾರು ಡಿವೈಡರ್‌ ಏರಿರುವುದನ್ನು ನೋಡಿದ ಸ್ಥಳೀಯರು ನೂರಾರು ಮಂದಿ ಸ್ಥಳದಲ್ಲಿ ಕಾತುರದಿಂದ ರಸ್ತೆಯಲ್ಲಿ ಚಲಿಸುವ ವಾಹನವನ್ನು ಲೆಕ್ಕಿಸದೆ ನಿಂತಿರುವ ದೃಶ್ಯ ಕಂಡು ಬಂದಿದ್ದು, ರಸ್ತೆಯ ಮೇಲೆ ಜನ ಜಮಾಯಿಸಿರುವುದನ್ನು ಅರಿತ ಕೋಟ ಪೊಲೀಸ್‌ ಸಿಬಂದಿಗಳು ಸಂಭವನೀಯ ಅವಘಡಗಳಿಗೆ ಕಾರಣವಾಗುವ ಸಾಧ್ಯತೆ ಹಿನ್ನಲೆಯಲ್ಲಿ ನೆರೆದಿದ್ದ ಸ್ಥಳೀಯರ ಸಹಕಾರದೊಂದಿಗೆ ಅಪಘಾತಕ್ಕೀಡಾದ ಕಾರನ್ನು ರಸ್ತೆಯ ಬದಿಯಲ್ಲಿರಿಸುವ ಜತೆಗೆ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಘಟನೆ ಕೂಡಾ ಸಂಭವಿಸಿತು.

ಚಿತ್ರ: ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next