Advertisement

Belthangady ಜೆಸಿಬಿಯಲ್ಲಿ ಅಗೆದು ಫೋನ್‌ ಕೇಬಲ್‌ ಕಳ್ಳತನ

10:09 PM Jun 10, 2024 | Team Udayavani |

ಬೆಳ್ತಂಗಡಿ: ಮಂಗಳೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಉಜಿರೆಯಲ್ಲಿ ಫೋನ್‌ ಕೇಬಲ್‌ ಕಳ್ಳತನ ನಡೆಸಿದ ಘಟನೆ ರವಿವಾರ ತಡರಾತ್ರಿ ನಡೆದಿದೆ.

Advertisement

ರಾತ್ರಿ ಒಂದು ಗಂಟೆ ಬಳಿಕ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಹುದುಗಿಡಲಾಗಿದ್ದ ಕೇಬಲ್‌ ಅನ್ನು ಕದ್ದೊಯ್ಯಲಾಗಿದೆ. ಬೇರೆ ಬೇರೆ ಕಡೆಗಳಿಂದ ಕದ್ದು ತಂದ ಕೇಬಲನ್ನು ಉಜಿರೆಯ ರಸ್ತೆ ಬದಿಯ ನಾಗಬನದ ಮುಂಭಾಗ ಚರಂಡಿಯಲ್ಲಿ ದಾಸ್ತಾನು ಮಾಡಿದ್ದು, ಮೇಲೆ ಮಣ್ಣು ಮುಚ್ಚಿ ಹಾಕಲಾಗಿತ್ತು. ರವಿವಾರ ರಾತ್ರಿ ಮಣ್ಣಿನ ಅಡಿಯಲ್ಲಿದ್ದ ಸುಮಾರು ಒಂದು ಕ್ವಿಂಟಲ್‌ನಷ್ಟು ಕೇಬಲ್‌ ಅನ್ನು ಜೆಸಿಬಿ ಮೂಲಕ ಅಗೆದು ತೆಗೆದುಕೊಂಡು ಹೋದ ದೃಶ್ಯ ಸಮೀಪದ ಅಂಗಡಿಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಪ್ರಸ್ತುತ ರಸ್ತೆ ಕಾಮಗಾರಿ ಕೆಲವೊಮ್ಮೆ ತಡರಾತ್ರಿ ನಡೆಯುತ್ತಿರುವುದರಿಂದ ಹಾಗೂ ರವಿವಾರ ತಡರಾತ್ರಿ ವಿಪರೀತ ಮಳೆ ಇದ್ದ ಕಾರಣ ಸ್ಥಳೀಯ ಅಂಗಡಿಯಲ್ಲಿ ಮಲಗಿದ್ದ ಮಂದಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಜೆಸಿಬಿಯಲ್ಲಿ ಅಗೆಯುವ ವೇಳೆ ಉಜಿರೆ-ಮುಂಡಾಜೆ ಸಂಪರ್ಕದ ಬ್ರಾಡ್‌ ಬ್ಯಾಂಡ್‌ ಕೇಬಲ್‌ ತುಂಡಾಗಿ ಅಂತರ್ಜಾಲ ಸಂಪರ್ಕ ಕಡಿತಗೊಂಡಿದ್ದು, ಸೋಮವಾರ ಬೆಳಗ್ಗೆ ಬಿಎಸ್‌ಎನ್‌ಎಲ್‌ನ ಸಿಬಂದಿ ಸಮಸ್ಯೆ ಹುಡುಕುವ ವೇಳೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬೆಳ್ತಂಗಡಿ ಬಿಎಸ್‌ಎನ್‌ಎಲ್‌ನ ಜೆಟಿಒ ಆಶಾ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next