Advertisement

Charmady: ಹಗಲಲ್ಲೇ ತೋಟಕ್ಕೆ ಕಾಡಾನೆ ದಾಳಿ!

11:17 PM Jun 10, 2024 | Team Udayavani |

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಎರಡು ದಿನಗಳಿಂದ ಕಾಡಾನೆ ಹಗಲಲ್ಲೇ ಕೃಷಿ ತೋಟಗಳಿಗೆ ದಾಳಿ ಇಟ್ಟು ಹಾನಿ ಉಂಟು ಮಾಡುತ್ತಿದೆ.

Advertisement

ಅನಾರು ವಿಶ್ವನಾಥ, ರಘುನಾಥ ವಸಂತ, ಕೋಡಿಹಿತ್ತಿಲು ಬಾಬು ಗೌಡ ಮೊದಲಾದವರ ತೋಟಗಳ 150ಕ್ಕಿಂತ ಅಧಿಕ ಅಡಿಕೆ ಮರ, ತೆಂಗಿನ ಮರ, ಬಾಳೆ ಗಿಡಗಳನ್ನು ಧ್ವಂಸ ಮಾಡಿದೆ.

ಸ್ಥಳೀಯರು ಕಾಡಾನೆಯನ್ನು ಓಡಿಸಿದ್ದು ಸಮೀಪದ ಅರಣ್ಯದಲ್ಲಿ ಬೀಡು ಬಿಟ್ಟಿದೆ. ಮತ್ತೆ ತೋಟಗಳಿಗೆ ದಾಳಿ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೆರಡು ಕಾಡಾನೆಗಳ ಹಿಂಡು ಇರುವುದಾಗ ಸ್ಥಳೀಯರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next