Advertisement

ಎಸ್ಪಿ ಮನೆಯಲ್ಲೇ ಕಳ್ಳತನ!

01:50 AM Jan 28, 2019 | |

ಧಾರವಾಡ: ಇಲ್ಲಿಯ ಸನ್ಮತಿ ನಗರದಲ್ಲಿರುವ ಲೋಕಾಯುಕ್ತ ಎಸ್‌ಪಿ ಶಿವಕುಮಾರ ಮನೆಯಲ್ಲಿಯೇ ಕಳ್ಳತನವಾಗಿದ್ದು, ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಎಸ್‌ಪಿ ಶಿವಕುಮಾರ ಅನ್ಯ ಕಾರ್ಯಕ್ರಮದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದರು. ಈ ವೇಳೆ ಮನೆಯ ಕೀಲಿ ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 2 ಲಕ್ಷ ರೂ. ನಗದು ಹಾಗೂ ಇತರೆ ಸಾಮಾನುಗಳನ್ನು ದೋಚಿದ್ದಾರೆ. ಘಟನೆ ನಡೆದು ಎರಡು ದಿನವಾಗಿದ್ದರೂ ಪೊಲೀಸರು ಮಾಹಿತಿ ನೀಡಿರಲಿಲ್ಲ. ಭಾನುವಾರ ಘಟನೆ ಬೆಳಕಿಗೆ ಬಂದಿದ್ದು, ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next