Advertisement

ಕುಂದಾಪುರದ ರಾಜಾಡಿ ದೇವಸ್ಥಾನದಲ್ಲಿ ಕಳ್ಳತನ

01:30 PM Dec 11, 2018 | |

ಕುಂದಾಪುರ: ತಾಲೂಕಿನ ತಲ್ಲೂರು ಸಮೀಪದ ರಾಜಾಡಿ ರಕ್ತೇಶ್ವರಿ ದೇವಸ್ಥಾನ ದೇವಸ್ಥಾನದಲ್ಲಿ ಸೋಮವಾರ ತಡರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ದೇವಿಯ ಬೆಳ್ಳಿಯ ಪ್ರಭಾವಳಿ, ಕರಿಮಣಿ ಸರ,ಕಾಣಿಕೆ ಡಬ್ಬಿಯ ಹಣ ಸಹಿತ ಸುಮಾರು 3  ಲಕ್ಷಕ್ಕೂ ಹೆಚ್ಚಿನ ಅಧಿಕ ಮೌಲ್ಯದ ಸೊತ್ತುಗಳನ್ನು ದೋಚಿದ್ದಾರೆ. 

Advertisement

ದೇವಸ್ಥಾನದ ಮಾಡು ಹತ್ತಿ ದೇವಸ್ಥಾನವನ್ನು ದೋಚಿ ನಂತರ ಹಿಂದಿನ ಬಾಗಿಲಿನ ಮೂಲಕ ಹೊರ ಹೋಗಿರುವುದು ತಿಳಿದು ಬಂದಿದೆ. 3 ಕಾಣಿಕೆ ಡಬ್ಬಿಯನ್ನು ಒಡೆದು ಹಣವನ್ನು ದೋಚಿದ್ದು, ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾ, ಡಿವಿಆರ್  ಸಹಿತ ಪರಾರಿಯಾಗಿದ್ದಾರೆ. 


ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಭೇಟಿ ನೀಡಿದ್ದು, ಬೆರಳಚ್ಚು ತಜ್ಞರು ಭೇಟಿ ನೀಡಿ ತನಿಖೆ ನಡೆಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next