Advertisement

ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ನುಗ್ಗಿದ ಕಳ್ಳರು: ನಗದು, ಆಭರಣ ಕಳ್ಳತನ

03:41 PM Sep 24, 2020 | keerthan |

ಕೊಪ್ಪಳ: ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಕಳೆದ ರಾತ್ರಿ ಕಳ್ಳತನ ನಡೆದಿದೆ.

Advertisement

ಖದೀಮರು ಬ್ಯಾಂಕಿನ ಶಟರ್ ಮುರಿದು ಲಾಕರ್ ಕಟ್ ಮಾಡಿ ಹಣ, ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದ ಆಭರಣವನ್ನು ಕಳ್ಳತನ ಮಾಡಿದ್ದಾರೆ. ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದ ಬಳಿಕ ಈ ಕಳ್ಳತನ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.‌

ತಕ್ಷಣ ಬೇವೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪಿಎಸ್ ಐ ಸ್ಥಳ ಪರಿಶೀಲನೆ ಮಾಡಿದ್ದಾರೆ. ಎಸ್ಪಿ ಜಿ ಸಂಗೀತಾ ಅವರು ಸ್ಥಳಕ್ಕೆ ಆಗಮಿಸಿ ಕಳ್ಳತನ ನಡೆದ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಎಷ್ಟು ನಗದು ಕಳ್ಳತನವಾಗಿದೆ, ಎಷ್ಟು ಆಭರಣ ಬ್ಯಾಂಕ್ ನಲ್ಲಿ ಇತ್ತು ಎನ್ನುವ ಕುರಿತು ದಾಖಲಾತಿ ಪರಿಶೀಲನೆ ನಡೆದಿದೆ. ಖದೀಮರು ಬ್ಯಾಂಕ್ ನಲ್ಲಿನ ಕಂಪ್ಯೂಟರ್ ಹಾರ್ಡಡಿಸ್ಕ್ ಸಹಿತ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ‌ ದಾಖಲಾದ ಬಳಿಕ ನಿಖರ ಮಾಹಿತಿ ತಿಳಿದು ಬರಲಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next