Advertisement

Gurdwara: ಗುರುದ್ವಾರದಲ್ಲಿ ಕಳ್ಳತನ: ಥಳಿಸಿ ಹತ್ಯೆ!

09:36 PM Oct 28, 2023 | Team Udayavani |

ಚಂಡೀಗಢ: ಪಂಜಾಬ್‌ನ ಮೊಗಾ ಜಿಲ್ಲೆಯ ಗುರುದ್ವಾರದಲ್ಲಿ ಕಳ್ಳತನದ ಆರೋಪದಲ್ಲಿ ಜನರ ಗುಂಪೊಂದು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿ ಹತ್ಯೆಗೈದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತನನ್ನು ಮೊಗಾ ಜಿಲ್ಲೆಯ ಗುರುಸರ್‌ ಮಡಿ ಗ್ರಾಮದ ಕರಮ್‌ ಸಿಂಗ್‌ ಎಂದು ಗುರುತಿಸಲಾಗಿದೆ.

Advertisement

ಅ.16ರಂದು ಗುರುದ್ವಾರದಲ್ಲಿ ಕಳ್ಳತನ ನಡೆದಿದೆ. ಕರಮ್‌ಸಿಂಗೇ ಕಳ್ಳತನ ಮಾಡಿದ್ದಾನೆಂಬ ಶಂಕೆಯಲ್ಲಿ ಗುಂಪೊಂದು ಆತನ ಕೈ-ಕಾಲು ಕಟ್ಟಿ ಹಾಕಿ, ದೊಣ್ಣೆಗಳಿಂದ ಥಳಿಸಿದೆ. ನಂತರ ಆಸ್ಪತ್ರೆಗೆ ದಾಖಲಾದ ಆತ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ. ಕರಮ್‌ ಸಿಂಗ್‌ ಕುಟುಂಬದವರು ನೀಡಿರುವ ದೂರಿನ ಆಧಾರದಲ್ಲಿ 22 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next