Advertisement

ಹುಂಡಿ ತೆಗೆಯಲು ಸಾಧ್ಯವಾಗದೆ ಚಿಲ್ಲರೆಯೊಂದಿಗೆ ಪರಾರಿಯಾದ ಕಳ್ಳರು

09:51 AM Oct 01, 2019 | Shripathi Bhat |

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹೊರ ಮಠದಲ್ಲಿ ಹುಂಡಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

Advertisement

ಭಾನುವಾರ ರಾತ್ರಿ ಹೊರ ಮಠದ ಉತ್ತರ ದಿಕ್ಕಿನ ಬಾಗಿಲ ಮೂಲಕ ದೇವಸ್ಥಾನ ಪ್ರವೇಶಿಸಿರುವ ಕಳ್ಳರು ಹುಂಡಿ ಕದ್ದಿದ್ದಾರೆ. ಹೊರಗೆ ತಂದು ಕಲ್ಲಿನಿಂದ ಜಜ್ಜಿ ಹಣ ದೋಚಲು ಪ್ರಯತ್ನಿಸಿದ್ದಾರೆ. ಹುಂಡಿ ತೆಗೆಯಲು ಸಾಧ್ಯವಾಗದೆ ಅದರಲ್ಲಿದ್ದ ಚಿಲ್ಲರೆಯೊಂದಿಗೆ ಪರಾರಿಯಾಗಿದ್ದಾರೆ.

ಬೆಳಗ್ಗೆ ದೇವಸ್ಥಾನ ಸಿಬ್ಬಂದಿ ಬಾಗಿಲು ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ. ಹೊರಮಠದ ಸಮೀಪದಲ್ಲಿ ಹುಂಡಿ ಬಿದ್ದಿದೆ.

ನಾಯಕನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ದೇವಸ್ಥಾನದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಅಲ್ಲಿಯೂ ಪರಿಶೀಲನೆ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next