Advertisement

Theft Case: 96 ಲಕ್ಷ ರೂ.ಗಳ ಸೊತ್ತು ಸ್ವಾಧೀನ, ಇಬ್ಬರ ಪತ್ತೆಗೆ ಶೋಧ

01:23 AM Mar 16, 2024 | Team Udayavani |

ವಿಟ್ಲ; ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‌ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಬೇಧಿಸಿ 95,70,918 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀಪಡಿಸಿಕೊಳ್ಳಲಾಗಿದೆ. ಪ್ರಕರಣ ದಲ್ಲಿ ಮೂವರನ್ನು ಬಂಧಿಸಿದ್ದು, ಇನ್ನೂ ಇಬ್ಬರು ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಎಸ್‌ಪಿ ಸಿ. ಬಿ. ರಿಷ್ಯಂತ್‌ ಹೇಳಿದರು.

Advertisement

ಫೆ. 7ರಂದು ನಡೆದಿದ್ದ ಪ್ರಕರಣದಲ್ಲಿ 17,28,735 ರೂ., 696.21 ಗ್ರಾಂ ಚಿನ್ನಾಭರಣ, 1 ಲಕ್ಷ ಮೌಲ್ಯದ ಬೆಳ್ಳಿಯನ್ನು ಕಳವು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ತನಿಖೆ ನಡೆಸಿ 2,40,700 ರೂ., ಕಳವು ಮಾಡಿದ ಹಣದಿಂದ ಖರೀದಿಸಿದ ಸುಮಾರು 9 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ಸಾಮಗ್ರಿಗಳು, 12,48,218 ರೂ. ಮೌಲ್ಯದ ಚಿನ್ನಾಭರಣ ಹಾಗೂ ಕಳವಿಗೆ ಬಳಸಿದ್ದ ಬ್ರೇಜಾ ಕಾರು, ಗ್ಯಾಸ್‌ ಕಟ್ಟರ್‌ ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ.

23 ಪ್ರಕರಣಗಳ ಆರೋಪಿ
ಆರೋಪಿ ಮಹಮ್ಮದ್‌ ರಫೀಕ್‌ (35) ವಿರುದ್ಧ ಈಗಾಗಲೇ ಒಟ್ಟು 23 ಪ್ರಕರಣಗಳು ದಾಖಲಾಗಿರುತ್ತವೆ. ಗೂಡಿನಬಳಿ ನಿವಾಸಿಯಾದ ಈತ ನ್ಯಾಯಾಲಯದಿಂದ ಜಾಮೀನು ಪಡೆದು ಬಂದು ಮತ್ತೆ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ. ಕಲಂದರ್‌ ವಿರುದ್ಧ 8 ಪ್ರಕರಣ ಗಳು ದಾಖಲಾಗಿವೆ. ಕಲಂದರ್‌ ಹಾಗೂ ಬಂಧಿತ ದಯಾನಂದ ಇಬ್ಬರೂ ಕೇರಳದ ಮಂಜೇಶ್ವರ ತಾಲೂಕಿನವರು.

ಮಹಮ್ಮದ್‌ ರಫೀಕ್‌ ವಿರುದ್ಧ ಬಂಟ್ವಾಳ ನಗರ (2 ಪ್ರಕರಣ), ವೇಣೂರು (2), ಪುತ್ತೂರು ಗ್ರಾಮಾಂತರ(1), ವಿಟ್ಲ (1), ಮಂಗಳೂರು ನಗರ ಪೂರ್ವ(2), ಉಳ್ಳಾಲ(1), ಮಂಗಳೂರು ನಗರ ದಕ್ಷಿಣ(4), ಮಂಗಳೂರು ಗ್ರಾಮಾಂತರ(1), ಬೆಂಗಳೂರು ನಗರ (6), ಹಾಗೂ ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಕಲಂದರ್‌ ವಿರುದ್ಧ ಪುತ್ತೂರು ಗ್ರಾಮಾಂತರ (2), ವಿಟ್ಲ (3), ಉಪ್ಪಿನಂಗಡಿ (1), ಮೂಡುಬಿದಿರೆ (1), ಕುಂಬಳೆ (1) ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ದ.ಕ. ಎಸ್‌ಪಿ ಸಿ. ಬಿ. ರಿಷ್ಯಂತ್‌ ಮತ್ತು ಎಎಸ್‌ಪಿ ಧರ್ಮಪ್ಪ ಎನ್‌.ಎಂ. ಹಾಗೂ ರಾಜೇಂದ್ರ ಡಿ. ಎಸ್‌. ಅವರ ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಎಸ್‌. ವಿಜಯ ಪ್ರಸಾದ್‌ ನಿರ್ದೇಶನದಂತೆ, ವಿಟ್ಲ ಪೊಲೀಸ್‌ ನಿರೀಕ್ಷಕ ನಾಗರಾಜ್‌ ಎಚ್‌.ಇ. ಅವರ ನೇತೃತ್ವದಲ್ಲಿ ಎಸ್‌ಐ ನಂದಕುಮಾರ್‌, ಉದಯ ರವಿ, ಹರೀಶ್‌ ಕುಮಾರ್‌, ವಿದ್ಯಾ ಕೆ.ಜೆ., ಪೊಲೀಸರಾದ ವೆಂಕಟರಮಣ ಗೌಡ, ಪ್ರವೀಣ್‌ ಮೂರುಗೋಳಿ, ಉದಯ ರೈ, ರಕ್ಷಿತ್‌ ರೈ , ಪ್ರವೀಣ್‌ ರೈ ಪಾಲ್ತಾಡಿ, ಅದ್ರಾಮ, ಕರುಣಾಕರ, ರಾಹುಲ್‌ ರಾವ್‌, ಶ್ರೀಧರ ಸಿ ಎಸ್‌., ಜಗದೀಶ್‌ ಅತ್ತಾಜೆ, ಹೇಮರಾಜ್‌, ಅಶೋಕ್‌, ವಿವೇಕ್‌ ಕೆ., ಕುಮಾರ್‌ ಎಚ್‌.ಕೆ. , ಸಂಪತ್‌, ದಿವಾಕರ್‌, ಸಂತೋಷ್‌, ಕುಮಾರ್‌ ಮಾಯಪ್ಪ ಭಾಗವಹಿಸಿರುತ್ತಾರೆ. ತಂಡಕ್ಕೆ ಎಸ್‌ಪಿ ನಗದು ಬಹುಮಾನ ಘೋಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next