Advertisement

ARRESTED: ಬೈಕ್‌,ಆಟೋ, ಮನೆ ಕಳವು ಮಾಡುತ್ತಿದ್ದ ನಾಲ್ವರ ಬಂಧನ

10:55 AM Oct 10, 2023 | Team Udayavani |

ಬೆಂಗಳೂರು: ರಾತ್ರಿ ವೇಳೆ ಬೈಕ್‌, ಆಟೋ ರಿಕ್ಷಾ, ಮನೆ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಕುಮಾರಸ್ವಾಮಿ ಲೇಔಟ್‌ನ ಇಮ್ರಾನ್‌ ಪಾಷಾ(27), ಮಂಗಮ್ಮನಪಾಳ್ಯದ ಹಿದಾಯತ್‌(25), ಜೆ.ಪಿ.ನಗರದ ಕನಕನಗರದ ನಾಸೀರ್‌ (28) ಹಾಗೂ ಸೈಯದ್‌ ಜುಬೇರ್‌ ಅಲಿಯಾಸ್‌ ಸುಬ್ಬಿ (21) ಬಂಧಿತರು.

Advertisement

ಆರೋಪಿಗಳಿಂದ 1.91 ಲಕ್ಷ ರೂ. ಮೌಲ್ಯದ 3 ದ್ವಿಚಕ್ರ ವಾಹನ, 2 ಪ್ಯಾಸೆಂಜರ್‌ ಆಟೋ, ಎರಡು ಸಿಲಿಂಡರ್‌, ಮೂರು ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕೆಂಗೇರಿಯ ಮೈಲಸಂದ್ರದ ಮುಕಾಂಬಿಕಾ ಲೇಔಟ್‌ನಲ್ಲಿ ಚೇತನ್‌ ಎಂಬವರು ಸ್ನೇಹಿತನ ಮನೆ ಮುಂದೆ ಬೈಕ್‌ ನಿಲ್ಲಿಸಿದ್ದರು. ಆರೋಪಿಗಳು ಈ ಬೈಕ್‌ ಅನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳು ಅಪರಾಧ ಹಿನ್ನೆಲೆ ವುಳ್ಳವರಾಗಿದ್ದಾರೆ. ಮೋಜು -ಮಸ್ತಿಗೆ ಸುಲಭವಾಗಿ ಹಣ ಹೊಂದಿಸಲು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು. ಈ ಹಿಂದೆ ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಗೆ ಬಂದು ಕಳವು ಪ್ರಕರಣಗಳಲ್ಲಿ ತೊಡಗಿದ್ದರು. ರಾತ್ರಿ ವೇಳೆ ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳು, ಆಟೋ ರಿಕ್ಷಾಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣ ಹಂಚಿಕೊಂಡು ತಮ್ಮ ದುಶ್ಚಟಗಳಿಗೆ ವ್ಯಯಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next