Advertisement

ಉಪ್ಪಿನಂಗಡಿ: ಅಂಗಡಿ, ಬಾರ್ ಗೆ ನುಗ್ಗಿ ಲಕ್ಷಾಂತರ ರೂ. ಕಳ್ಳತನ

11:57 AM Dec 11, 2020 | keerthan |

ಉಪ್ಪಿನಂಗಡಿ: ಒಂದೇ ಕಟ್ಟಡದಲ್ಲಿರುವ ಅಂಗಡಿ ಹಾಗೂ ಬಾರ್ ನ ಬೀಗ ಮುರಿದು ಲಕ್ಷಾಂತರ ರೂ. ನಗದು ದೋಚಿದ ಘಟನೆ ರಾಷ್ಟೀಯ ಹೆದ್ದಾರಿ 75ರ ಉಪ್ಪಿನಂಗಡಿ ಪ್ರವೇಶ ದ್ವಾರದ ಬಳಿ ನಡೆದಿದೆ.

Advertisement

ಇಲ್ಲಿನ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿರುವ ಉಲ್ಲಾಸ್ ಬಾರ್ ಹಾಗೂ ಸಮೀಪದ ದಿನಸಿ ಅಂಗಡಿಗೆ ನುಗ್ಗಿ ನಗದು ದೋಚಲಾಗಿದೆ.

ದಿನಸಿ ಅಂಗಡಿಯ ಬೀಗ ಮುರಿದು ನಗದು ದೋಚಿದ ಕಳ್ಳರು ಪಕ್ಕದಲ್ಲಿರುವ ಉಲ್ಲಾಸ್ ಬಾರ್ ನ ಹಿಂಬಾಗಿಲಿನಿಂದ ಒಳನ್ನುಗ್ಗಿದ್ದಾರೆ. ಕ್ಯಾಶ್ ಕೌಂಟರ್ ನಿಂದ ಕಳ್ಳರು ಹಣ ದೋಚಿದ್ದು, ಪರಾರಿಯಾಗಿದ್ದಾರೆ.

ಇದನ್ನೂ ಓದಿ:ಕರೋಪಾಡಿ : ಸಿಡಿಲು ಬಡಿದು ವ್ಯಕ್ತಿ ಸಾವು ; ಮನೆಗೆ ಹಾನಿ

Advertisement

ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next