Advertisement

Sirsi ಬಂಗಾರದ ಅಂಗಡಿಯಲ್ಲಿ ಕಳ್ಳತನ; ಮೂವರು ಮಹಿಳೆಯರ ಬಂಧನ

08:13 PM Jun 16, 2023 | Team Udayavani |

ಶಿರಸಿ: ಇಲ್ಲಿನ ಬಂಗಾರದ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಆಭರಣ ದೋಚಿದ ಘಟನೆ ನಡೆದ 24 ಗಂಟೆಯೊಳಗೆ ಮೂವರು‌ ಮಹಿಳೆಯರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ ಘಟನೆ ನಡೆದಿದೆ.

Advertisement

ನಗರದ ಉರ್ದು ಶಾಲಾ ಹಿಂದಿನ ಮಾರುಕಟ್ಟೆ ರಸ್ತೆಯ ಓಂಕಾರ್ ಜ್ಯುವೆಲ್ಲರಿ ಅಂಗಡಿಯಲ್ಲಿ ಸುಮಾರು 93ಸಾವಿರ ರೂ ಮೌಲ್ಯದ ಚಿನ್ನಾಭರಣ ಗಳನ್ನು ಕದ್ದು ಪರಾರಿಯಾಗಿದ್ದ ಮೂವರು ಚೋರಿಯರು ಕಳ್ಳತನವಾದ ಚಿನ್ನಾಭರಣಗಳ ಸಹಿತ‌ ಕಂಬಿ ಎಣಿಸುತ್ತಿದ್ದಾರೆ. ಶಿರಸಿ ನಗರ ಠಾಣೆ ಪೊಲೀಸರು ಆರೋಪಿತರಿಗೆ ಕಾನೂನು‌ ಕೋಳ ತೊಡಿಸಿದ್ದಾರೆ.

ಅಡುಗೆ ವೃತ್ತಿಯ ಗದಗದ ಸಂಗೀತಾ ಯಲ್ಲೋಸಾ ಬಾಕಳೆ(42), ಹುಬ್ಬಳ್ಳಿಯ ಸೀರೆ ವ್ಯಾಪಾರಿ ರಾಜೇಶ್ವರಿ ಬಾಂಡಗೇ (48) ಹಾಗೂ ಗದಗದ ಟೇಲರ್ ಶೋಭಾಬಾಯಿ ಲಕ್ಷಮಣಸಾ ಜಿತೂರಿ (68)ಬಂಧಿತ ಆರೋಪಿಗಳಾಗಿದ್ದಾರೆ.

ಜೂನ್ 15ರಂದು ವಾಮನ ನಾಗೇಶ್ ರಾಯ್ಕರ್ ಎಂಬುವವರಿಗೆ ಸೇರಿದ ಓಂಕಾರ್ ಜ್ಯುವೆಲ್ಲರಿ ಅಂಗಡಿಗೆ ಬಂದು ಚಿನ್ನಾಭರಣ ಗಳನ್ನು ಕದ್ದು ಪರಾರಿಯಾಗಿದ್ದರು.ಕಳ್ಳತನದ ದೃಶ್ಯಾವಳಿಗಳು ಸಿ ಸಿ ಕ್ಯಾಮೆರಾ ದಲ್ಲಿ ಸೆರೆ ಯಾಗಿತ್ತು. ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಶಿರಸಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next