Advertisement

ಲಾಕ್ ಡೌನ್ ಅವಧಿಯ್ಲೂ ಕಳ್ಳತನ: ದಿನಸಿ ಅಂಗಡಿಯಿಂದ ನಾಲ್ಕು ಲಕ್ಷ ರೂ. ನಗದು ಕಳ್ಳತನ

09:33 AM May 31, 2021 | Team Udayavani |

ಶಿವಮೊಗ್ಗ: ಲಾಕ್ ಡೌನ್ ಅವಧಿಯಲ್ಲೂ ಕಳ್ಳರು ಅಂಗಡಿಯೊಂದರ ಬೀಗ ಒಡೆದು ನಗದು ಕಳ್ಳತನ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇಲ್ಲಿನ ಗಾಂಧಿ ನಗರದ ದಿನಸಿ ಆಂಗಡಿಯೊಂದರಲ್ಲಿ ಕಳೆದ ರಾತ್ರಿ ವೇಳೆ ಕಳ್ಳತನವಾಗಿದೆ.

Advertisement

ಗಾಂಧಿ ನಗರದ ಪಾರ್ಕ್ ಮುಂಭಾಗ ಇರುವ ಮಂಜುನಾಥ ಪ್ರಾವಿಷನ್ ಸ್ಟೋರ್ ಬೀಗ ಒಡೆದು, ಕಳ್ಳರು ನಗದು ದೋಚಿದ್ದಾರೆ. ಅಂದಾಜು ನಾಲ್ಕು ಲಕ್ಷ ರೂ. ಹಣ ದೋಚಿರುವ ಶಂಕೆ ಇದೆ.

ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next