Advertisement

ಮೆಣಸಿನಕಾಯಿ ಮಾರಾಟ ಅಂಗಡಿಯಲ್ಲಿ 4.80 ಲಕ್ಷ ರೂ. ಕಳ್ಳತನ: ಆರೋಪಿ ಬಂಧನ

02:17 PM Jun 11, 2021 | Team Udayavani |

ಹುಬ್ಬಳ್ಳಿ: ಇಲ್ಲಿನ ಎಪಿಎಂಸಿಯ ಮೆಣಸಿನಕಾಯಿ ಮಾರಾಟ ಅಂಗಡಿಯಲ್ಲಿ 4.80 ಲಕ್ಷ ರೂ. ಕಳ್ಳತನ ಮಾಡಿದ್ದ ಓರ್ವನನ್ನು ಎಪಿಎಂಸಿ- ನವನಗರ ಠಾಣೆ ಪೊಲೀಸರು ಬಂಧಿಸಿ, ಆತನಿಂದ 2.80 ಲಕ್ಷ ರೂ. ಹಾಗೂ ಕಾರು ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

Advertisement

ಹಾಸನ ಜಿಲ್ಲೆ ವಿಜಯನಗರ ಪಾರ್ಕ್ ರೋಡ್ ನಿವಾಸಿ ಮಹಮ್ಮದ್ ಇಕ್ಬಾಲ್ ಅಬ್ದುಲ್ ಜಬ್ಬರ್ ಬಂಧಿತ.

ಇದನ್ನೂ ಓದಿ:ಮೈಸೂರಿನಲ್ಲಿ ಭೂ ಹಗರಣ : ಪ್ರಾದೇಶಿಕ ಆಯುಕ್ತರಿಂದ ತನಿಖೆಯಾಗಬೇಕು ಎಂದ ಹೆಚ್. ವಿಶ್ವನಾಥ್

ಈತನು ಇಲ್ಲಿನ ಎಪಿಎಂಸಿ ಯಾರ್ಡ್ ದಲ್ಲಿನ ಸೈಯದಸಾಬ್ ಲಿಂಬುವಾಲೆ ಅವರ ಮೆಣಸಿನಕಾಯಿ ಅಂಗಡಿಯಲ್ಲಿ ಫೆಬ್ರವರಿ 8ರಂದು ಮಧ್ಯಾಹ್ನ ಕ್ಯಾಶ್ ಲಾಕರ್ ನಲ್ಲಿದ್ದ 4.80ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದ. ಖಚಿತ ಮಾಹಿತಿ ಮೇರೆಗೆ ಎಪಿಎಂಸಿ-ನವನಗರ ಠಾಣೆ ಪೊಲೀಸರು ಆರೋಪಿಯನ್ನು ಜೂ. 9ರಂದು ಹಾಸನದಲ್ಲಿ ಪತ್ತೆ ಮಾಡಿ, 2.80ಲಕ್ಷ ರೂ. ಸಮೇತ ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next