Advertisement

ಕೊರೊನಾ ಗೆದ್ದ ಯುವಕ

11:11 PM Mar 15, 2020 | Team Udayavani |

ಕಾರವಾರ: ಕೊರೊನಾ ಭೀತಿಯಿಂದ ಡೈಮಂಡ್‌ ಪ್ರಿನ್ಸಸ್‌ ಕ್ರೂಸ್‌ ಹಡಗಿನಲ್ಲಿ ಸಿಲುಕಿಕೊಂಡು ಬಳಿಕ ಭಾರತ ಸರ್ಕಾರದ ಪ್ರಯತ್ನದಿಂದ ಸ್ವದೇಶಕ್ಕೆ ವಾಪಸ್‌ ಬಂದಿದ್ದ ಅಭಿಷೇಕ ಎಂಬ ಕಾರವಾರದ ಯುವಕ, ಕೊರೊನಾ ವೈರಸ್‌ ಭೀತಿಯಿಂದ ತಪ್ಪಿಸಿ ಕೊಂಡು ಮನೆ ತಲುಪಿದ್ದಾನೆ.

Advertisement

ಹರಿಯಾಣದ ಮನಸೇರ್‌ನಲ್ಲಿ 14 ದಿನಗಳ ವೈದ್ಯಕೀಯ ತಪಾಸಣೆ ಪರೀಕ್ಷೆ ಮುಗಿಸಿದ ಅಭಿಷೇಕ ಬಾಲ ಕೃಷ್ಣ ಮಗರ್‌ ಶನಿವಾರ ರಾತ್ರಿ ಕಾರ ವಾರ ತಲುಪಿದ್ದಾನೆ. ಡೈಮಂಡ್‌ ಪ್ರಿನ್ಸಸ್‌ ಹಡಗಿನಿಂದ ಅಭಿಷೇಕನನ್ನು ಹೊರ ತಂದು ಭಾರತಕ್ಕೆ ಮರಳಲು ಸಹಾಯ ಮಾಡಿದ ಭಾರತ ಸರ್ಕಾರಕ್ಕೆ ಅಭಿಷೇಕ್‌, ಅವರ ತಂದೆ ಬಾಲಕೃಷ್ಣ, ತಾಯಿ ರೂಪಾಲಿ ಧನ್ಯವಾದ ಹೇಳಿದರು. ಮಗ ಮನೆಗೆ ಮರಳಿದ ಖುಷಿ ಅವರ ಕಣ್ಣಲ್ಲಿ ತುಂಬಿ ತುಳುಕುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next