Advertisement

Kadri ಮಂಜುನಾಥ ದೇವಸ್ಥಾನದಲ್ಲಿ ದಾಂಧಲೆ ನಡೆಸಿದ ಯುವಕ ಮತ್ತೆ ಹಾಜರು!

10:53 PM Jul 10, 2024 | Team Udayavani |

ಮಂಗಳೂರು: ಮಂಗಳವಾರದಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣಕ್ಕೆ ಬೈಕ್‌ ನುಗ್ಗಿಸಿ ಅರ್ಚಕರಿಗೆ ಹಲ್ಲೆ ನಡೆಸಲು ಯತ್ನಿಸಿ ಛಾವಣಿ ಏರಿ ದಾಂಧಲೆ ನಡೆಸಿದ್ದ ಉಳ್ಳಾಲದ ದಿವಾಕರ ಆಚಾರ್ಯ (31) ಬುಧವಾರ ಮತ್ತೆ ದೇವಸ್ಥಾನಕ್ಕೆ ಬಂದಿದ್ದಾನೆ. ಆದರೆ ದಾಂಧಲೆ ನಡೆಸಿಲ್ಲ. ದೇವಸ್ಥಾನದ ಪಕ್ಕದಲ್ಲಿದ್ದ ಭಿಕ್ಷುಕರಿಗೆ ಹಣ ನೀಡಿದ್ದಾನೆ.

Advertisement

ಸಂಚಾರಿ ಪೊಲೀಸರ ಜತೆಯೂ ಕಿರಿಕ್‌
ಬುಧವಾರ ಹೆಲ್ಮೆಟ್‌ ಧರಿಸದೇ ಬೈಕ್‌ನಲ್ಲಿ ಬರುತ್ತಿದ್ದ ಈತನನ್ನು ನಗರದ ಬೆಂದೂರ್‌ವೆಲ್‌ನಲ್ಲಿ ಸಂಚಾರಿ ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ಪೊಲೀಸರೊಂದಿಗೆ ವಾದ ನಡೆಸಿ ತೆರಳಿದ್ದಾನೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next