Advertisement

ಮಂತ್ರಾಲಯ ಶ್ರೀಗಳಿಂದ ಪದ್ಮನಾಭ ತೀರ್ಥರ ಆರಾಧನೆ

06:05 AM Dec 07, 2018 | Team Udayavani |

ಗಂಗಾವತಿ: ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡಿಯಲ್ಲಿ ಗುರುವಾರ ಪದ್ಮನಾಭ ತೀರ್ಥರ ಮಧ್ಯಾರಾಧನೆ ನಡೆಯಿತು.

Advertisement

ಮಂತ್ರಾಲಯ ಮಠದ ಪೀಠಾಧ್ಯಕ್ಷ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಪದ್ಮನಾಭ ತೀರ್ಥರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಆರತಿ ಮಾಡಲಾಯಿತು. ಇದಕ್ಕೂ ಪೂರ್ವ ಮಂತ್ರಾಲಯ ಶ್ರೀಗಳು ಮೂಲ ರಾಮದೇವರ ಮೂರ್ತಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಬುಧೇಂದ್ರ ತೀರ್ಥರು, ಪದ್ಮನಾಭ ತೀರ್ಥರ ಆರಾಧನೆ ಕುರಿತು ನ್ಯಾಯಾಲಯ ಆದೇಶವನ್ನು ಮಂತ್ರಾಲಯ ಮಠ ಪಾಲಿಸಿದೆ. ಉತ್ತರ ಮತ್ತು ಮಧ್ಯಾರಾಧನೆ ಮಾಡಿ ನ್ಯಾಯಾಲಯ ಸೂಚನೆಯಂತೆ ಮುಂದಿನ ಆರಾಧನೆ ಮಾಡಲು ಉತ್ತರಾ ದಿ ಮಠದವರಿಗೆ ಅವಕಾಶ ನೀಡಲಾಗಿದೆ. ಎರಡೂ ಮಠಗಳು ಆರಾಧನೆಯನ್ನು ಸೌಹಾರ್ದತೆಯಿಂದ ಆಚರಿಸಿದರೆ ಒಳ್ಳೆಯದು ಎಂದರು.ಮಂತ್ರಾಲಯ, ರಾಯಚೂರು, ಬಳ್ಳಾರಿ ಕೊಪ್ಪಳ ಜಿಲ್ಲೆಗಳ ಅನೇಕ ಭಕ್ತರು ಮಧ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next