Advertisement

ಸಚ್ಚೇರಿಪೇಟೆಯಲ್ಲೊಬ್ಬ ಭಗೀರಥ

12:30 AM Mar 23, 2019 | Team Udayavani |

ಬೆಳ್ಮಣ್‌: ಸಾವಿರಗಟ್ಟಲೆ ಅಡಿಗಳಷ್ಟು ಬೋರ್‌ವೆಲ್‌ ಕೊರೆದರೂ ನೀರು ಸಿಗದ ಈ ಬರಗಾಲದಲ್ಲಿ ಸಚ್ಚೇರಿಪೇಟೆಯ ಭುವನೇಶ ಗೌಡ ತನ್ನ 5 ಸೆಂಟ್ಸ್‌  ಜಾಗದಲ್ಲಿ ದಿನಂಪ್ರತಿ ಸಂಜೆ 5.30ರಿಂದ 7.30ರವರೆಗೆ ಬಾವಿ ತೋಡಿ 16 ದಿನಗಳಲ್ಲಿ ನೀರು ಪಡೆದಿದ್ದಾರೆ. 

Advertisement

ಹಗಲಲ್ಲಿ ಕಾಂಟ್ರಾಕ್ಟ್  ಕೆಲಸ ಮಾಡಿ ಪ್ರತೀ ದಿನ ರಾತ್ರಿ ಮಣ್ಣು ಅಗೆದು ಒಟ್ಟು 18 ಅಡಿ ಬಾವಿ ತೋಡಿ ಇದೀಗ ಎರಡು ಅಡಿ ನೀರು ಪಡೆದು ಪಕ್ಕದ ಮೂರು ಮನೆಗೂ ಜಲಪೂರೈಕೆ ಮಾಡುತ್ತಿದ್ದಾರೆ. ಇವರ ಸಾಧನೆ ಮೆಚ್ಚುಗೆಗೆ ಕಾರಣವಾಗಿದೆ. 
 
32ರ ಹರೆಯದ  ಭುವನೇಶ ಗೌಡ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪಾವಂಜಿಗುಡ್ಡೆ ಎಂಬಲ್ಲಿ ವಾಸಿಸುತ್ತಿದ್ದು ಹಲವಾರು ವರ್ಷಗಳಿಂದ ನೀರಿನ ತೊಂದರೆ ಅನುಭವಿಸುತ್ತಿದ್ದರು. ಈ ಪರಿಸರದಲ್ಲಿ  ಸರಕಾರಿ ಸೈಟುಗಳ ಜನರೂ ನೀರಿನ ತೊಂದರೆ ಅನುಭವಿಸಿ ಜಾಗ ಮಾರಲಾರಂಭಿಸಿದಾಗ ಭುವನೇಶರು ತಾನೂ ಒಂದು ಸೈಟು ಖರೀದಿಸಿದ್ದರು. ಬಳಿಕ ನೀರಿನ ಸಮಸ್ಯೆ ಇದ್ದರಿಂದ ಸಂಜೆ ವೇಳೆ ಬಾವಿ ತೋಡಲು ಶುರುಮಾಡಿದ್ದರು.
  
ಬಾಲ್ಯದ ಪಾಠ ಸಹಕಾರಿಯಾಯಿತು
ಈ ಹಿಂದೆ ಶಾಲಾ ರಜಾ ದಿನಗಳಲ್ಲಿ ಬಾವಿ ತೋಡುವ ಕೆಲಸಕ್ಕೆ ಚೆರಿಯಮೋನು ಎಂಬ ಗುತ್ತಿಗೆದಾರರ ಬಳಿ ಕೆಲಸ ಮಾಡಿದ್ದ ಅನುಭವವೇ ಇಲ್ಲಿ ಸಹಕಾರಿಯಾಯಿತು ಎನ್ನುವ ಭುವನೇಶ ಇದೀಗ ನಮ್ಮ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ ಎನ್ನುವುದರ ಜತೆ ಇತರ ಎರಡು-ಮೂರು ಮನೆಗಳಿಗೂ ನೀರು ನೀಡುವ ಹೆಮ್ಮೆ ಇದೆ ಎನ್ನುತ್ತಾರೆ.  

Advertisement

Udayavani is now on Telegram. Click here to join our channel and stay updated with the latest news.

Next