Advertisement

ದಿ ವಿಲನ್‌ ತಂಡದ ಗರಿಕೆ ಹುಲ್ಲಿನ ಗಣಪ

11:17 AM Sep 15, 2018 | |

ಶಿವರಾಜಕುಮಾರ್‌ ಮತ್ತು ಸುದೀಪ್‌ ಅಭಿನಯದ “ದಿ ವಿಲನ್‌’ ಚಿತ್ರದ ಬಿಡುಗಡೆಯ ದಿನಾಂಕವನ್ನು ಗಣಪತಿ ಹಬ್ಬದಂದು ಘೋಷಿಸುವುದಾಗಿ ನಿರ್ದೇಶಕ ಪ್ರೇಮ್‌ ಹೇಳಿಕೊಂಡಿದ್ದರು. ಅದರಂತೆ “ದಿ ವಿಲನ್‌’ ಚಿತ್ರತಂಡವು ಗಣಪತಿ ಹಬ್ಬದಂದು ಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿ, ನಂತರ ಅಕ್ಟೋಬರ್‌ 18ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

Advertisement

ಹೌದು, “ದಿ ವಿಲನ್‌’ ಚಿತ್ರತಂಡದವರು ಗುರುವಾರ ಬೆಳಿಗದಗೆ ಗರಿಕೆ ಹುಲ್ಲಿನಲ್ಲಿ ಗಣಪತಿಯನ್ನು ಮಾಡಿಸಿ, ಪ್ರತಿಷ್ಠಾಪನೆ ಮಾಡಿತು. ನಂತರ ಪ್ರೇಮ್‌, ರಕ್ಷಿತಾ ಪ್ರೇಮ್‌, ನಿರ್ಮಾಪಕ ಸಿ.ಆರ್‌. ಮನೋಹರ್‌, ಸಂಭಾಷಣೆಕಾರ ಮಳವಳ್ಳಿ ಸಾಯಿಕೃಷ್ಣ, ಸಂಕಲನಕಾರ ಶ್ರೀನಿವಾಸ್‌ ಬಾಬು ಸೇರಿದಂತೆ ಚಿತ್ರತಂಡದ ಇತರೆ ಸದಸ್ಯರು ಭಾಗಿಯಾಗಿ ವಿದ್ಯುಕ್ತವಾಗಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ನಿರ್ಮಾಪಕ ಎಂ.ಎನ್‌. ಕುಮಾರ್‌, ನಿರ್ದೇಶಕ ಮಹೇಶ್‌ ಬಾಬು ಸೇರಿದಂತೆ ಹಲವರು ಭಾಗವಹಿಸಿದ್ದರು. ಇನ್ನು ಗಣಪತಿ ಹಬ್ಬದಂದು ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸುವುದಾಗಿ ಪ್ರೇಮ್‌ ಹೇಳಿಕೊಂಡಿದ್ದರು. ಅದರಂತೆ ಅಕ್ಟೋಬರ್‌ 18ರಂದು ಚಿತ್ರವನ್ನು ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ಜಗತ್ತಿನಾದ್ಯಂತ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next