Advertisement

23ರಂದು ಕುಮಾರಸ್ವಾಮಿಗೆ ಹೃದಯದ ಕವಾಟ ಬದಲು

09:56 AM Sep 19, 2017 | Team Udayavani |

ರಾಮನಗರ: ಸೆ.23ರಂದು ತಮ್ಮ ಹೃದಯದ ವಾಲ್ಟ್ ಬದಲಾವಣೆಗಾಗಿ ಶಸ್ತಚಿಕಿತ್ಸೆಗೆ ಒಳಗಾಗುತ್ತಿರುವುದಾಗಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

Advertisement

ಶನಿವಾರ ನಿಧನರಾದ ತಮ್ಮ ಆಪ್ತ ಕಾರ್ಯದರ್ಶಿ ವೈ.ಟಿ.ಸೋಮಶೇಖರ್‌ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 2007ರಲ್ಲಿ ತಮ್ಮ ಹೃದಯದಲ್ಲಿ ಟಿಶ್ಯು ವಾಲ್ಟ್ ಅಳವಡಿಸಲಾಗಿತ್ತು. ಇದೇ ವಾಲ್ಟ್ನ ಬದಲಾವಣೆ ಮಾಡಬೇಕಾಗಿದೆ ಎಂಬ ವೈದ್ಯರು ಸಲಹೆಯಂತೆ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ಈಗಾಗಲೇ ತಾವು ಬೆಂಗಳೂರು ಮತ್ತು ಅಮೆರಿಕಾ ವೈದ್ಯರ ಸಲಹೆಯನ್ನು ಪಡೆದುಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ರೀತಿಯ ಪರೀಕ್ಷೆಗಳಿಗೂ ಒಳಪಟ್ಟಿರುವುದಾಗಿ ತಿಳಿಸಿದರು. 

ಕಳೆದ ಡಿಸೆಂಬರ್‌ನಲ್ಲಿ ಆಂಜಿಯೋಗ್ರಾಂ, ಇಕೋ ಪರೀಕ್ಷೆಗಳನ್ನು ಮಾಡಿಸಿದಾಗ ವೈದ್ಯರು ವಾಲ್ಟ್ ಬದಲಾವಣೆ ಸಮಸ್ಯೆ ಇಲ್ಲ ಎಂದಿದ್ದರು. ಆರೇಳು ತಿಂಗಳುಗಳಿಂದ ತಮಗೆ ಕೆಮ್ಮಿನ ಸಮಸ್ಯೆ ಇದ್ದು, ನಿವಾರಣೆಯಾಗಿಲ್ಲ. ಕೆಮ್ಮಿನಿಂದಾಗಿಯೇ ಹೃದಯದ ಮೇಲೆ ಒತ್ತಡ ಬಿದ್ದು ವಾಲ್ಟ್ ಬದಲಾಯಿಸಬೇಕಾಗಿದೆ. ಇಸ್ರೆಲ್‌ ಪ್ರವಾಸಕ್ಕೆ ತೆರಳಿದ ವೇಳೆ ಮುಂಬೈನಲ್ಲೇ ತಮಗೆ ನಿಶ್ಶಕ್ತರಾಗುತ್ತಿದ್ದ ಅನುಭವ ಆಗಿತ್ತು. ಆದರೂ ರೈತರಿಗೆ ಏನಾದರೊಂದು ವಿಶಿಷ್ಟ ಕಾರ್ಯಕ್ರಮ ಕೊಡಬೇಕೆಂಬ ಉದ್ದೇಶದಲ್ಲಿ ಪ್ರವಾಸವನ್ನು ಮುಂದುವರಿಸಿದ್ದೆ. ಇಸ್ರೆಲ್‌ನಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂಬ ಸಲಹೆ ಬಂತು. ನಂತರ ತಾವು ಸುಧಾರಿಸಿಕೊಂಡು ಬೆಂಗಳೂರಿಗೆ ಬಂದಿದ್ದು, ಇದೀಗ ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ಆಗಲಿದೆ ಎಂದರು.

ಕೆಲವು ಮಾಧ್ಯಮಗಳಲ್ಲಿ ತಮ್ಮ ಆರೋಗ್ಯ ಸಮಸ್ಯೆ ಕುರಿತು ಊಹಾಪೋಹದ ಸುದ್ದಿಗಳನ್ನು ಬಿತ್ತರ ಮಾಡುತ್ತಿವೆ. ಕಾರ್ಯಕರ್ತರು ಇದಕ್ಕೆ ಕಿವಿಗೊಡಬಾರದು, ಶಸ್ತ್ರ ಚಿಕಿತ್ಸೆ ನಂತರ 15 ದಿನ ವಿಶ್ರಾಂತಿ ಪಡೆದು ಮತ್ತೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next