Advertisement

ಮೈಸೂರಿನಲ್ಲಿ ನಡೆದ ಹನಿಟ್ರ್ಯಾಪ್‌ನಲ್ಲಿ ನಗರದ ಮೂವರ ಸೆರೆ

11:33 AM Mar 12, 2017 | |

ಮೈಸೂರು: ಮೈಸೂರಿನಲ್ಲಿ ನಡೆದ ಹನಿ ಟ್ರ್ಯಾಪ್‌ ಪ್ರಕರಣವೊಂದರಲ್ಲಿ ಬೆಂಗಳೂರಿನ ಮೂವರು ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಾಗಿರುವ ಲತೀಫ್(29), ಸಿ.ಪಿ.ನೌಶಾದ್‌(39) ಹಾಗೂ ರಶೀದ್‌(32) ಕೇರಳ ಮೂಲದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇವರೊಂದಿಗೆ ಚಿಕ್ಕಮಗಳೂರಿನ ಯೂಸೂಫ್(40), ಮೈಸೂರಿನ ಉದಯಗಿರಿ ನಿವಾಸಿ ಹೀನಾ(22) ಹಾಗೂ ಮಡಿಕೇರಿಯ ಅನಿತಾ(32) ಬಂಧನಕ್ಕೊಳ ಗಾಗಿದ್ದಾರೆ.ಇವರಿಂದ ಡಿವಿಡಿ, ಮೊಬೈಲ್‌ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ.

Advertisement

ಪ್ರಕರಣದ ಹಿನ್ನೆಲೆ: ಕೇರಳ ಮೂಲದ ಆಭರಣ ವ್ಯಾಪಾರಿ ಟಿ.ವಿ.ನಿರಝಾರ್‌ ಎಂಬು ವರು ಕೆಲಸದ ನಿಮಿತ್ತ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ನಿರಝಾರ್‌ ಹಿನ್ನೆಲೆ ತಿಳಿದಿದ್ದ ಆರೋಪಿಗಳಾದ ನೌಶಾದ್‌ ಹಾಗೂ ಶಾಯಿದ್‌ ವ್ಯಾಪಾರಿಯನ್ನು ಹನಿ ಟ್ರಾÂಪ್‌ ಮಾಡಲು ತೀರ್ಮಾನಿಸಿದ್ದರು. ಇದಕ್ಕಾಗಿ ಹೀನಾ ಹಾಗೂ ಅನಿತಾ ಎಂಬ ಯುವತಿಯರನ್ನು ಬಳಸಿಕೊಂಡಿದ್ದರು.

ಯುವತಿಯರು ನಿರಝಾರ್‌ ಅವರಿಗೆ ಅಪರಿಚಿತರಂತೆ ದೂರವಾಣಿ ಕರೆಮಾಡಿ, ಸ್ನೇಹ ಬೆಳಸಿಕೊಂಡಿದ್ದರು. ಇದಾದ ಬಳಿಕ ತಮ್ಮೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ನಿರಝಾರ್‌ರನ್ನು ಪ್ರೇರೇಪಿಸಿದ ಅನಿತಾ ಹಾಗೂ ಹೀನಾ, ಲೈಂಗಿಕ ಕ್ರಿಯೆಯನ್ನು ಪೂರ್ವ ನಿಯೋಜನೆಯಂತೆ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ನಂತರ ದೃಶ್ಯಾವಳಿಗಳನ್ನು ಡಿವಿಡಿ ಮಾಡಿಕೊಂಡಿದ್ದಾರೆ.

ವಿಡಿಯೋವನ್ನು ನಿರಝಾರ್‌ಗೆ ತೋರಿಸಿ 25 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದಲ್ಲಿ ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಮೊಬೈಲ್‌ ಮೂಲಕ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆವೊಡ್ಡಿದ್ದ ಆರೋಪಿಗಳು, ಕಳೆದ ಕೆಲವು ದಿನ ಗಳಿಂದ ಹಣ ನೀಡುವಂತೆ ಮೇಲಿಂದ ಮೇಲೆ ಕರೆ ಮಾಡುತ್ತಿದ್ದರು.

ಆರೋಪಿಗಳ ಕಿರುಕುಳ ದಿಂದ ಆತಂಕಗೊಂಡ ನಿರಝಾರ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತೀವ್ರತೆಯನ್ನು ಅರಿತ ಪೊಲೀಸರು, ಇದನ್ನು ಸಿಸಿಬಿ ತನಿಖೆಗೆ ವಹಿಸಿದ್ದರು. ಇದಕ್ಕಾಗಿ ವಿಶೇಷ ತಂಡವನ್ನು ರಚಿಸಿಕೊಂಡ ಸಿಸಿಬಿ ಪೊಲೀಸರು, ಮಾ.9ರಂದು ನಗರದ ಹೈವೇ ವೃತ್ತದ ಸಮೀಪದಲ್ಲಿರುವ ಹೋಟೆಲ್‌ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಬಂಧಿತರ ವಿಚಾರಣೆ ನಡೆಸಿದ ಸಂದರ್ಭ, ಆರೋಪಿಗಳ ವಿರುದ್ಧ ಈ ಹಿಂದೆಯೇ ಕೇರಳ ಮತ್ತು ಬೆಂಗಳೂರಿನಲ್ಲಿ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಡಾ. ಎಚ್‌.ಟಿ.ಶೇಖರ್‌, ಎನ್‌.ರುದ್ರಮುನಿ, ಸಿಸಿಬಿ ಎಸಿಬಿ ಸಿ.ಗೋಪಾಲ್‌, ಇನ್ಸ್‌ಪೆಕ್ಟರ್‌ಗಳಾದ ಕೆ.ಸಿ.ಪ್ರಕಾಶ್‌, ಪ್ರಸನ್ನಕುಮಾರ್‌, ಪಿಎಸ್‌ಐ ಎಂ.ಜೆ.ಜಯಶೀಲನ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next