Advertisement

ಉತ್ರಂಬೆ: ಬಾಗಿ ನಿಂತ ಮರ, ಅಪಾಯಕ್ಕೆ ಆಹ್ವಾನ

11:42 AM Apr 29, 2018 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ -ಜಾಲ್ಸೂರು ಸಂಪರ್ಕ ಮಾರ್ಗದ ನಡುಗಲ್ಲು ಪೇಟೆಯಿಂದ ಸ್ವಲ್ಪ ಮುಂದಕ್ಕೆ ಉತ್ರಂಬೆ ಬಳಿ ಮುಖ್ಯ ರಸ್ತೆ ಬದಿಯಲ್ಲಿರುವ ಮರವೊಂದು ವಾಲಿ ನಿಂತು ಅಪಾಯದ ಸ್ಥಿತಿಯಲ್ಲಿದೆ.

Advertisement

ತೀರಾ ತಿರುವಿನಲ್ಲಿ ಮರ ಬಾಗಿ ನಿಂತಿದ್ದು, ಬಸ್‌, ಲಾರಿ ಸಹಿತ ಘನ ವಾಹನಗಳು ಸಂಚರಿಸುವಾಗ ತಡೆಯುತ್ತಿದೆ. ಏಕಕಾಲದಲ್ಲಿ ರಸ್ತೆಯ ಎರಡೂ ಬದಿಗಳಿಂದ ವಾಹನಗಳು ಚಲಿಸಿದಲ್ಲಿ ಅಪಘಾತ ಆಗುವ ಸಂಭವವಿದೆ. ಮರ ತುಂಬಾ ಬಾಗಿದ್ದು, ತೀರಾ ಕೆಳಗಿನ ಆಂತರದಲ್ಲಿದೆ. ಯಾವುದೇ ಹಂತದಲ್ಲಿ ಇದು ರಸ್ತೆ ಮೇಲೆ ಉರುಳಿ ಬೀಳುಬಹುದು. ಅದು ಚಲಿಸುತ್ತಿರುವ ವಾಹನಗಳ ಮೇಲೆ ಬಿದ್ದು ಜೀವ ಹಾನಿ ಸಾಧ್ಯತೆಯೂ ಇದೆ. ಈ ಮಾರ್ಗವಾಗಿ ಸಾವಿರಾರು ವಾಹನಗಳ ನಿತ್ಯ ಸಂಚರಿಸುತ್ತಿದ್ದು, ಬಾಗಿದ ಮರವನ್ನು ತತ್‌ಕ್ಷಣ ತೆರವುಗೊಳಿಸದಿದಲ್ಲಿ ಅಪಾಯ ಸಾಧ್ಯತೆ ಹೆಚ್ಚು. ಸಂಬಂದಿಸಿದ ಇಲಾಖೆಯವರು ಈ ಕುರಿತು ಗಮನಹರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next