Advertisement

‘ಪರಿವರ್ತನೆಯ ಸಾಧಕ’ಬಿರುದು

11:26 AM Jan 19, 2018 | Team Udayavani |

ಮಹಾನಗರ: ಇತ್ತೀಚೆಗೆ ತ್ಯಾಗರಾಜರ್‌ ಕಾಲೇಜು ಮಧುರೈಯಲ್ಲಿ ನಡೆದ ಸಮಾರಂಭದಲ್ಲಿ ವಾಮಂಜೂರಿನ
ಸೈಂಟ್‌ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿಗೆ ಐಯುಸಿಇಇ ಈ ವರ್ಷದ ಪರಿವರ್ತನೆಯ ಸಾಧಕ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.

Advertisement

ಕಳೆದ ಕೆಲ ವರ್ಷಗಳಲ್ಲಿ ಈ ಬಿರುದು ಹುಬ್ಬಳ್ಳಿಯ ಬಿವಿಬಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ (ಕೆಎಲ್‌ಇ ಟೆಕ್‌ ಯುನಿ
ವರ್ಸಿಟಿ), ಬೆಂಗಳೂರು ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು, ಪುಣೆ ಎಂಜಿನಿಯರಿಂಗ್‌ ಕಾಲೇಜಿಗೆ ಈ ಪ್ರಶಸ್ತಿ
ದೊರೆತಿದ್ದು, ಪ್ರಸಕ್ತ ವರ್ಷ ನಗರದ ಸೈಂಟ್‌ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿಗೆ ಬಿರುದು ನೀಡಿ ಗೌರವಿಸಲಾಗಿದೆ.

ಐಯುಸಿಇಇ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಕೃಷ್ಣ ವೆದುಲ್ಲಾ, ಕಾಲೇಜಿನ ಉಪ ಪ್ರಾಂಶುಪಾಲ ಡಾ| ರಿಯೋ
ಡಿ’ಸೋಜಾ, ಅಸಿಸ್ಟೆಂಟ್‌ ಪ್ರೊಫೆಸರ್‌ಗಳಾದ ಡಾ| ಶ್ರೀರಂಗ ಭಟ್‌, ಸತೇಂದ್ರ ಭಟ್‌, ರಾಗೇಶ್‌ ರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next