Advertisement

ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಜಲಸಮಾಧಿ

10:45 PM Dec 31, 2019 | Team Udayavani |

ಕಲಬುರಗಿ: ಶೈಕ್ಷಣಿಕ ಕ್ಯಾಂಪ್‌ಗೆ ಬಂದಿದ್ದ ಮೂವರು ವಿದ್ಯಾರ್ಥಿಗಳು ಕಮಲಾಪುರ ತಾಲೂಕಿನ ಬೆಳಕೋಟಾ ಡ್ಯಾಂ ಬಳಿಯ ಹಿನ್ನೀರಿನಲ್ಲಿ ಈಜಲು ಹೋಗಿ ಜಲಸಮಾಧಿಯಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

Advertisement

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಂಜುಟಗಿಯ ಸತ್ಯಸಾಯಿ ಪ್ರೇಮ ನಿಕೇತನ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಇಂಡಿಯ ಮಂಜುನಾಥ ಚನ್ನು ಯಾದವಾಡ (15), ವಿಜಯಪುರದ ಶುಭಂ ಶರಣು ಹೊಸೂರ (15), ದೇವರ ಹಿಪ್ಪರಗಿಯ ಲಕ್ಷ್ಮಣ ಭೀಮರಾಯ ಡೊಣ್ಣೂರ (14) ಮೃತರು.

ಅಂಜುಟಗಿಯಿಂದ ಡಿ.25ರಂದು ಶೈಕ್ಷಣಿಕ ಕ್ಯಾಂಪ್‌ಗಾಗಿ ಕಮಲಾಪುರ ಬಳಿಯ ನವನಿಹಾಳದ ಸತ್ಯಸಾಯಿ ವಿವಿಗೆ 96 ವಿದ್ಯಾರ್ಥಿಗಳು ಬಂದಿದ್ದರು. ಮಂಗಳವಾರ ಮಧ್ಯಾಹ್ನ 2ಕ್ಕೆ ಬೆಳಕೋಟಾ ಡ್ಯಾಂ ನೋಡಲು ವಿದ್ಯಾರ್ಥಿಗಳೊಂದಿಗೆ ನಾಲ್ವರು ಶಿಕ್ಷಕರೂ ಜತೆಗಿದ್ದರು.

ಈ ವೇಳೆ ಮೂವರು ವಿದ್ಯಾರ್ಥಿಗಳು, ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಈಜುಗಾರರು ವಿದ್ಯಾರ್ಥಿಗಳನ್ನು ಬದುಕಿಸಲು ಸಾಕಷ್ಟು ಯತ್ನಿಸಿದರೂ ಸಫಲವಾಗಿಲ್ಲ. ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next