Advertisement

ಮುದಗಲ್ಲ ಹೋಬಳಿಯಲ್ಲಿ 17,171.82 ಹೆಕ್ಟೇರ್‌ ಬಿತ್ತನೆ ಗುರಿ

11:11 AM Jul 07, 2017 | Team Udayavani |

ಮುದಗಲ್ಲ: ಮುದಗಲ್ಲ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ
ಆಗಿದ್ದರಿಂದ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ವಿವಿಧ ಬೆಳೆ ಬಿತ್ತನೆಯಲ್ಲಿ ತೊಡಗಿರುವ ರೈತರಿಗೆ ಕೃಷಿ ಕಾರ್ಮಿಕರ ಸಮಸ್ಯೆ ಎದುರಾಗಿದೆ.

Advertisement

ಮುದಗಲ್ಲ ಹೋಬಳಿ ವ್ಯಾಪ್ತಿಯ  ನಾಗಲಾಪುರ, ಕನ್ನಾಳ, ತಿಮ್ಮಾಪುರ, ಜಕ್ಕರಮಡು, ಹಡಗಲಿ, ದೇಸಾಯಿ ಭೋಗಾಪುರ, 
ವ್ಯಾಸನಂದಿಹಾಳ, ಮಟ್ಟೂರ, ಬುದ್ದಿನ್ನಿ, ಆಶಿಹಾಳ, ಲೆಕ್ಕಿಹಾಳ, ಆಮದಿಹಾಳ, ನಾಗರಾಳ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ರೈತರು ವಿವಿಧ ಬೀಜಗಳ  ಬಿತ್ತನೆಯಲ್ಲಿ ತೊಡಗಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಮೃಗಶಿರಾ ಮಳೆ ಆಗಿದ್ದಿಲ್ಲ. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆ ಸುರಿದಿದ್ದು, ಸಕಾಲದಲ್ಲಿ  ಬಿತ್ತನೆ ಕಾರ್ಯ ನಡೆದಿದೆ. ಸಜ್ಜೆ, ಸೂರ್ಯಕಾಂತಿ, ಹೆಸರು, ತೊಗರಿ, ಹತ್ತಿ, ಅಲಸಂದಿ ಬೀಜಗಳ
ಬಿತ್ತನೆಗೆ ಭೂಮಿ ಹದವಾಗಿದೆ ಎಂದು ಕನ್ನಾಳ ಗ್ರಾಮದ ರೈತ ಹನುಮಂತ ತಿಳಿಸಿದ್ದಾರೆ. 

ಕೂಲಿಕಾರರ ಕೊರತೆ: ಒಂದೆಡೆ ರೈತರು ಕೃಷಿ  ಚಟುವಟಿಕೆಯಲ್ಲಿ ತೊಡಗಿದ್ದರೆ, ಕೃಷಿ ಕಾರ್ಯಕ್ಕೆ ಕೂಲಿಕಾರರ ಸಮಸ್ಯೆ ಎದುರಾಗಿದೆ. ಮುಂಗಾರು  ಹಂಗಾಮಿನ ಶೇಂಗಾ, ಮೆಣಸಿನಕಾಯಿ, ಸೂರ್ಯಕಾಂತಿ, ಹತ್ತಿ, ತೊಗರಿ, ಹೆಸರು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳ ಬೀಜ  ಬಿತ್ತನೆ ಹಾಗೂ ಈರುಳ್ಳಿ (ಉಳ್ಳಾಗಡ್ಡೆ) ಸಸಿ ನಾಟಿ ಮಾಡಲಾಗುತ್ತಿದೆ. ಮಹಿಳಾ ಕೂಲಿಕಾರರ ಸಮಸ್ಯೆ
ಎದುರಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ನಾಗರಹಾಳ, ನಾಗಲಾಪುರ, ಆಮದಿಹಾಳ, ಆಶಿಹಾಳ, ಖೈರವಾಡಗಿ, ಕನ್ನಾಳ, ಹಡಗಲಿ, ಛತ್ತರ, ಮರಳಿ, ಹುನೂರ ಸೇರಿದಂತೆ ಮುದಗಲ್ಲ ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಈರುಳ್ಳಿ ಸಸಿ ನಾಟಿ ಮಾಡಲು ಮುಂದಾಗಿರವ ರೈತರು ಮಹಿಳಾ ಕೂಲಿ ಆಳುಗಳಿಗಾಗಿ ಊರಿಂದೂರಿಗೆ ಹುಡುಕಾಟ ನಡೆಸಿದ್ದಾರೆ. 

ಗ್ರಾಮೀಣ ಪ್ರದೇಶದ ಅನೇಕ ಕೃಷಿ ಕೂಲಿ ಕಾರ್ಮಿಕರು ದುಡಿಯಲು ಹೊರ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಪುಣೆ ಸೇರಿದಂತೆ
ಬೆಂಗಳೂರ, ಉಡುಪಿ, ಮಂಗಳೂರ, ಕಾರವಾರ ನಗರಗಳಿಗೆ ಗುಳೆ ಹೋಗಿದ್ದರಿಂದ ಕೂಲಿಕಾರರ ಸಮಸ್ಯೆ ಎದುರಾಗಿದೆ. ದಿನಕ್ಕೆ 100ರಿಂದ 150 ಮಹಿಳೆಯರಿಗೆ, 150ರಿಂದ 200 ರೂ. ಪುರುಷರಿಗೆ ಕೂಲಿ ನೀಡಿದರೂ ಈರುಳ್ಳಿ ಸಸಿ ನಾಟಿ ಮಾಡುವ ಕೆಲಸಕ್ಕೆ ಯಾರು ಸಿಗುತ್ತಿಲ್ಲ ಎಂದುಆಮದಿಹಾಳ ಗ್ರಾಮದ ರೈತರಾದ ಹುಲಿಗಪ್ಪ, ದುರುಗಪ್ಪ, ಗದ್ದೆಪ್ಪ ತಿಳಿಸಿದ್ದಾರೆ.

Advertisement

ಮುದಗಲ್ಲ ಹೋಬಳಿ ವ್ಯಾಪ್ತಿಯಲ್ಲಿ 50 ಹಳ್ಳಿಗಳು ಬರುತ್ತಿದ್ದು, ಒಟ್ಟು 17,171.82 ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ರೈತರಿಗೆ ಬೇಕಾಗುವ ಸೂರ್ಯಕಾಂತಿ, ತೊಗರಿ, ಸಜ್ಜೆ, ಹೆಸರು, ಅಲಸಂದಿ ಬೀಜ
ಸೇರಿದಂತೆ ರಸಗೊಬ್ಬರ, ಸಾವಯವ ಗೊಬ್ಬರ ಸಂಗ್ರಹವಿದೆ. ರೈತರು ರೈತ ಸಂಪರ್ಕ ಕೇಂದ್ರಗಳಿಂದ ಬೀಜ, ರಸಗೊಬ್ಬರ ಪಡೆಯಬಹುದು. 
 ವೆಂಕಟೇಶ ಕುಲಕರ್ಣಿ, ಕೃಷಿ ಅಧಿಕಾರಿ, ಮುದಗ

Advertisement

Udayavani is now on Telegram. Click here to join our channel and stay updated with the latest news.

Next