Advertisement

ತಂದೆ CM ಆಗಿದ್ದಾಗ ವರ್ಗಾವಣೆಯಲ್ಲಿ ತೊಡಗಿದ್ದಾತನೇ ರಾಜ್ಯಾಧ್ಯಕ್ಷ: ಸಚಿವ ಲಾಡ್‌ ವ್ಯಂಗ್ಯ

11:25 PM Nov 19, 2023 | Team Udayavani |

ಹುಬ್ಬಳ್ಳಿ: ಪುತ್ರ ವಿಜಯೇಂದ್ರ ಭ್ರಷ್ಟ ಎನ್ನುವ ಕಾರಣಕ್ಕೆ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈಗ ಅದೇ ವಿಜಯೇಂದ್ರರನ್ನು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರದೇಶದಲ್ಲಿ ಅಪ್ಪ ಹಾಗೂ ಮಗ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವ ದೃಶ್ಯಾವಳಿಗಳು ಬಂದಿವೆ. ಅದರ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಹೇಳಿ. ಸುಮ್ಮನೆ ಯಾವುದೋ ಒಂದರ ಬಗ್ಗೆ ಮಾತನಾಡಿದರೆ ಹೇಗೆ? ಸಿದ್ದರಾಮಯ್ಯರ ಪುತ್ರ ಯತೀಂದ್ರ ಮಾತಿನ ದೃಶ್ಯಾವಳಿಯಲ್ಲಿ ವರ್ಗಾವಣೆ ಎಂಬ ಪದವೇ ಇಲ್ಲ. ಮುಖ್ಯಮಂತ್ರಿಗಳು ಈಗಾಗಲೇ ಅದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದರು.

ಆಂತರಿಕ ಕಚ್ಚಾಟ ಜೋರು
ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ವಿಪಕ್ಷ ನಾಯಕನಾಗಿ ಆರ್‌.ಅಶೋಕ ಅವರನ್ನು ನೇಮಕ ಮಾಡಲಾಗಿದೆ. ಅದಕ್ಕೂ ಬಿಜೆಪಿಯಲ್ಲಿ ವಿರೋಧವಿದೆ. ಆದರೆ ಅವರ ಆಂತರಿಕ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next