Advertisement

ಮುಗುಳುನಗೆ ಚಿತ್ರದ “ನಿನ್ನಾ ಸ್ನೇಹ…’ಗೀತೆ ಬಿಡುಗಡೆ

11:44 AM Jul 16, 2017 | Team Udayavani |

ಮೈಸೂರು: ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಮುಗುಳುನಗೆ ಚಿತ್ರದ ‘ನಿನ್ನಾ ಸ್ನೇಹದಿಂದ ಎಲ್ಲಾ ಚೆಂದ ಚೆಂದ’ ಗೀತೆಯ ಸೀಡಿಯನ್ನು ಬಿಡುಗಡೆ ಮಾಡಲಾಯಿತು. ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸೀಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಗಣೇಶ್‌, ಇಲ್ಲಿ ಬಿಡುಗಡೆ ಮಾಡಲಾದ ಗೀತೆಯನ್ನು ಮೈಸೂರು ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಜು.22 ರಂದು ಮುಗುಳುನಗೆ ಸಿನಿಮಾದ ಎಲ್ಲಾ ಹಾಡುಗಳನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದರು.

Advertisement

ಚಿತ್ರದ ನಾಯಕ ನಟಿ ಆಶಿಕಾ ರಂಗನಾಥ್‌ ಮಾತನಾಡಿ, ಯೋಗರಾಜ್‌ ¸‌ಟ್‌ ರಚಿಸಿದ ಗೀತೆಗೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಶ್ರೇಯಾ ಘೋಶಾಲ್‌ ಮಧುರ ಕಂಠದಲ್ಲಿ ‘ನಿನ್ನಾ ಸ್ನೇಹದಿಂದ’ ಗೀತೆ ಸಖತ್‌ ಆಗಿ ಮೂಡಿಬಂದಿದೆ. ಹೆಣ್ಣಿನ ಮನದಾಳದ ಮಾತುಗಳನ್ನು ಹಾಡಿನ ಮೂಲಕ ತೋರಿಸಲಾಗಿದ್ದು, ಹೆಣ್ಣು ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ. ತನ್ನ ಸಿನಿಮಾ ಜೀವನದಲ್ಲೇ ಇದೊಂದು ಸುಂದರ ಹಾಡಾಗಿದೆ ಎಂದರು.

ನಿರ್ದೇಶಕ ಯೋಗರಾಜ್‌ ಭಟ್‌ ಮಾತನಾಡಿ, ಸಂಪ್ರದಾಯ ಹಾಗೂ ಪಾರಂಪರಿಕತೆಯ ತವರು ಮೈಸೂರು. ಇಲ್ಲಿನ ಜನರ ಸೌಜನ್ಯ ಗುಣ ತನಗಿಷ್ಟ. ತಾನೂ ಸಹ ಇಲ್ಲಿಯೇ ಓದಿದ್ದು, ತನ್ನ ಎಲ್ಲಾ ಸಿನಿಮಾಗಳು ಇಲ್ಲಿಂದಲೇ ಆರಂಭವಾಗುತ್ತದೆ. ಅಂತೆಯೇ ಮಗುಳುನಗೆಯ ಕಥೆ, ಚಿತ್ರದ ನಾಯಕ ಹಾಗೂ ನಾಯಕಿ ಇಲ್ಲಿನವರೆ ಆಗಿರುತ್ತಾರೆ. ಅವರಿಬ್ಬರ ಜತೆಗಿನ ಹಾಡನ್ನು ಇಲ್ಲಿಯೇ ಹೆಚ್ಚಾಗಿ ಚಿತ್ರೀಕರಿಸಿ ಇಲ್ಲಿಯೇ ಬಿಡುಗಡೆ ಮಾಡುತ್ತಿರುವುದು ಖುಷಿ ತಂದಿದೆ ಎಂದರು.

ಮುಗುಳನಗೆ ಚಿತ್ರದ ‘ಹೊಡಿ ಒಂಬತ್ತು’ ಗೀತೆಯ ಸೀಡಿಯನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಿದರೆ, ‘ರೂಪಸಿ ನಿನ್ನ’ ಎನ್ನುವ ಗೀತೆಯ ಸೀಡಿಯನ್ನು ಗಣೇಶ್‌ ಪತ್ನಿ ಶಿಲ್ಪಾ ಅವರ ಹುಟ್ಟು ಹಬ್ಬದಂದು ಗಣೇಶ್‌ ಮನೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಗೀತ ರಚನೆಕಾರ ಜಯಂತ ಕಾಯ್ಕಿಣಿ, ಸಹ ಕಲಾವಿದ ಚಂದನ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಇದಕ್ಕೂ ಮುನ್ನ ನಗರದ ಮಹಾರಾಣಿ ಹಾಗೂ ಮಹಾರಾಜ ಕಾಲೇಜಿಗೆ ಭೇಟಿ ನೀಡಿದ ಚಿತ್ರತಂಡ ಈ ಎರಡೂ ಕಾಲೇಜುಗಳಲ್ಲಿ ಚಿತ್ರಗೀತೆಯ ಲಿರಿಕಲ್‌  ಹಾಗೂ ಮೇಕಿಂಗ್‌ ವಿಡಿಯೋ ಬಿಡುಗಡೆ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next