Advertisement

ತಂದೆ ಮತ್ತು ತಂದೆಯ ಪ್ರೇಯಸಿಯನ್ನು ಹತ್ಯೆಗೈದ ಪುತ್ರ

02:15 PM Oct 23, 2021 | Team Udayavani |

ಮೈಸೂರು: ಪ್ರೇಯಸಿ ಮನೆಯಲ್ಲಿದ್ದ ತನ್ನ ತಂದೆ ಹಾಗೂ ತಂದೆಯ ಪ್ರೇಯಸಿಯನ್ನು ಮಗನೊಬ್ಬ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಹೊರವಲಯ ದಲ್ಲಿರುವ ಶ್ರೀನಗರದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ನಗರದ ಕೆ.ಜಿ. ಕೊಪ್ಪಲು ನಿವಾಸಿ ಶಿವಪ್ರಕಾಶ್‌ (56) ಮತ್ತು ಇವರ ಪ್ರೇಯಸಿ ದಡದಹಳ್ಳಿ ರೈಲ್ವೆ ಗೇಟ್‌ ಬಳಿಯ ಶ್ರೀನಗರ ನಿವಾಸಿ ಲತಾ (48) ಹತ್ಯೆಗೀಡಾದವರು.

Advertisement

ಮೃತ ಶಿವಪ್ರಕಾಶ್‌ ಪುತ್ರ ಸಾಗರ್‌ (30) ಎಂಬಾತ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ. ಶಿವಪ್ರಕಾಶ್‌ ಕುಟುಂಬವು ಕೆ.ಜಿ. ಕೊಪ್ಪಲಿನಲ್ಲಿ ವಾಸವಾ ಗಿದ್ದು, ಲತಾ ಅವರು ಶ್ರೀನಗರದಲ್ಲಿ ವಾಸವಾಗಿದ್ದರು. ಲತಾ ವಿಧವೆಯಾಗಿದ್ದು, ಇವರಿಗೆ ಮೂವರು ಮಕ್ಕಳು ಇದ್ದಾರೆ. ಗುರುವಾರ ರಾತ್ರಿ ಲತಾ ಮನೆಯಲ್ಲಿದ್ದ ಶಿವಪ್ರಕಾಶ್‌ ಹುಡುಕಿಕೊಂಡು ಪುತ್ರ ಸಾಗರ್‌ ಅಲ್ಲಿಗೆ ಹೋಗಿ ಅನೈತಿಕ ಸಂಬಂಧ ತೊರೆದು ಮನೆಗೆ ಬರುವಂತೆ ತನ್ನ ತಂದೆಗೆ ಸಾಗರ್‌ ಬುದ್ಧಿ ಹೇಳಿದ್ದಾನೆ.

ಇದನ್ನೂ ಓದಿ:- ಲಸಿಕಾಕರಣದಲ್ಲಿ ಭಾರತ ಐತಿಹಾಸಿಕ ಸಾಧನೆ

ಈ ವೇಳೆ ತಂದೆ ಮತ್ತು ಮಗನ ನಡುವೆ ಜಗಳವಾಗಿ ವಿಕೋಪಕ್ಕೆ ತಿರುಗಿದೆ. ನಂತರ ಮೊದಲೇ ಸಿದ್ಧವಾಗಿ ಹೋಗಿದ್ದ ಸಾಗರ್‌ ತನ್ನ ಬಳಿಯಿದ್ದ ಮಚ್ಚಿನಿಂದ ತಂದೆ ಶಿವಪ್ರಕಾಶ್‌ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಈ ವೇಳೆ ಮಧ್ಯಪ್ರವೇಶಿಸಿದ ಲತಾ ಮೇಲೂ ಮಚ್ಚಿನ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದ ಲತಾ ಪುತ್ರ ನಾಗಾರ್ಜುನ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜೋಡಿ ಕೊಲೆ ಮಾಡಿದ ಸಾಗರ್‌ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ಹೆಚ್ಚುವರಿ ಎಸ್ಪಿ ಆರ್‌. ಶಿವಕುಮಾರ್‌, ಮೈಸೂರು ದಕ್ಷಿಣ ಠಾಣೆಯ ಇನ್ಸ್‌ಪೆಕ್ಟರ್‌ ಶಶಿಕುಮಾರ್‌ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಾಗಿ ಶೋಧ ಆರಂಭಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next