Advertisement

“ಎರಡನೇ  ಸಲ’ ಸಿನಿಮಾ ಮುಂದುವರೆಸಲು ಒಪ್ಪಿಗೆ

03:45 AM Mar 09, 2017 | Team Udayavani |

ಬೆಂಗಳೂರು: “ಎರನಡೇ ಸಲ’ ಚಿತ್ರದ ನಿರ್ಮಾಪಕ ಯೋಗೇಶ್‌ ನಾರಾಯಣ್‌ ಹಾಗೂ ನಿರ್ದೇಶಕ ಗುರುಪ್ರಸಾದ್‌ ನಡುವೆ ಇದ್ದ ಮುನಿಸು ಇದೀಗ ಅಂತ್ಯಗೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ನೇತೃತ್ವದಲ್ಲಿ ಬುಧವಾರ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. 

Advertisement

“ಎರಡನೇ ಸಲ’ ಚಿತ್ರದ ಪ್ರಚಾರಕ್ಕೆ ನಿರ್ದೇಶಕರು ಬರುತ್ತಿಲ್ಲ, ಅವರಿಂದ ಚಿತ್ರಕ್ಕೆ ಅನ್ಯಾಯವಾಗಿದೆ. ಚಿತ್ರ ತಡವಾಗಲು ಅವರೇ ಕಾರಣ, ಒಂಭತ್ತು ತಿಂಗಳಲ್ಲಿ ಮುಗಿಯಬೇಕಾಗಿದ್ದ ಸಿನಿಮಾ ನಾಲ್ಕು ವರ್ಷಗಳ ಕಾಲ ಮಾಡಿ, ನಷ್ಟಕ್ಕೆ ಕಾರಣರಾಗಿದ್ದಾರೆ. ನನಗೆ ನ್ಯಾಯ ಬೇಕು ಎಂದು ಯೋಗೇಶ್‌ ಮಂಡಳಿಗೆ ದೂರು ನೀಡಿದ್ದರು.

ಈ ದೂರಿನನ್ವಯ ಮಂಡಳಿ ಕರೆದಿದ್ದ ಸಭೆಗೆ ಆಗಮಿಸಿದ್ದ ಗುರುಪ್ರಸಾದ್‌, ಸಿನಿಮಾ ಪ್ರಚಾರಕ್ಕೆ ಆಗಮಿಸುವುದಾಗಿ ಹೇಳಿದ್ದಾರೆ. ನಿರ್ಮಾಪಕ ಯೋಗೇಶ್‌ ಸಹ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಉಳಿಸಿ, ಪ್ರದರ್ಶನ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next