Advertisement

ಎರಡನೇ ದಿನವೂ ಚುರುಕುಗೊಂಡ ಲಸಿಕೆ ಅಭಿಯಾನ

12:27 AM Mar 03, 2021 | Team Udayavani |

ಬೆಂಗಳೂರು: ಕೊರೊನಾ ಲಸಿಕೆ ಅಭಿಯಾನದ ದ್ವಿತೀಯ ಹಂತದ ಎರಡನೇ ದಿನವಾದ ಮಂಗಳವಾರ ರಾಜ್ಯಾದ್ಯಂತ ಲಸಿಕೆ ನೀಡಿಕೆ ಚುರುಕು ಪಡೆದಿದ್ದು, ಒಟ್ಟು 6,313 ಸಾರ್ವಜನಿಕರು ಲಸಿಕೆ ಸ್ವೀಕರಿಸಿದ್ದಾರೆ.

Advertisement

ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಮಂಗಳವಾರ ಲಸಿಕೆ ಪಡೆದರು. ಮೊದಲ ದಿನಕ್ಕೆ ಹೋಲಿಸಿದರೆ ಮಂಗಳವಾರ ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು, ಮೈಸೂರು, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಬೆಳಗಾವಿ, ಬಳ್ಳಾರಿಯಲ್ಲಿ ತಲಾ ನೂರಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ. ಅತೀ ಕಡಿಮೆ- ಚಾಮರಾಜನಗರ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿಯಲ್ಲಿ ತಲಾ ನೂರಕ್ಕಿಂತಲೂ ಕಡಿಮೆ ಮಂದಿ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೆಲವೆಡೆ ಎರಡನೇ ದಿನವೂ ಕೋವಿನ್‌ ಪೋರ್ಟಲ್‌ ತಾಂತ್ರಿಕ ಸಮಸ್ಯೆ ಮುಂದು ವರಿದಿದೆ. ಆಗಾಗ ಸರ್ವರ್‌ ಡೌನ್‌ ಆಗುತ್ತಿದ್ದುದ ರಿಂದ ಫ‌ಲಾನುಭವಿಗಳ ಮಾಹಿತಿ ಸೇರ್ಪಡೆಗೆ, ಪರಿಶೀಲನೆಗೆ ಸಮಸ್ಯೆಯಾಗಿದೆ.

ಮನೆಯಲ್ಲೇ ಲಸಿಕೆ ಪಡೆದ ಬಿ.ಸಿ. ಪಾಟೀಲ್‌
ಕೃಷಿ ಸಚಿವ ಬಿ.ಸಿ. ಪಾಟೀಲ್‌ ಮಂಗಳವಾರ ಹಿರೇಕೆರೂರಿನ ತಮ್ಮ ಮನೆಯಲ್ಲೇ ಸರಕಾರಿ ವೈದ್ಯರಿಂದ ಲಸಿಕೆ ಪಡೆದಿದ್ದು, ವಿವಾದದ ಸ್ವರೂಪ ಪಡೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಬಿ.ಸಿ. ಪಾಟೀಲ್‌, ಜನರಿಗೆ ತೊಂದರೆ ಕೊಡಬಾರದೆಂದು ಮನೆಯಲ್ಲೇ ಲಸಿಕೆ ಹಾಕಿಸಿಕೊಂಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next