Advertisement

ಸೀಲ್‌ಡೌನ್‌ಗೂ ಜನರಿಂದ ಸಹಕಾರ ಇಲ್ಲ

03:18 AM Apr 12, 2020 | Sriram |

ಬೆಂಗಳೂರು: ಚಾಮರಾಜಪೇಟೆ ವ್ಯಾಪ್ತಿಯ ಪಾದರಾಯನಪುರ ಹಾಗೂ ಬಾಪೂಜಿನಗರ ವಾರ್ಡ್‌ನಲ್ಲಿ ಸೀಲ್‌ಡೌನ್‌ ಮಾಡಿದರೂ ಈ ವಾರ್ಡ್‌ ವ್ಯಾಪ್ತಿಯ ಕೆಲವರು ಸಹಕಾರ ನೀಡುತ್ತಿಲ್ಲ. ಈ ಎರಡು ವಾರ್ಡ್‌ ಗಳಲ್ಲೇ ಕಳೆದ ಎರಡು ದಿನಗಳಲ್ಲಿ ಏಳು ಕೋವಿಡ್ 19
ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ಮಾಡಲಾಗಿತ್ತು.

Advertisement

ಆರೋಗ್ಯ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಹೊರಗೆ ಬನ್ನಿ, ಇಲ್ಲವಾದರೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬೇಡಿ ಎಂದು ಬಿಬಿಎಂಪಿ ಹಾಗೂ ಪೊಲೀಸ್‌ ಅಧಿಕಾರಿ ಗಳು ಸೂಚನೆ ನೀಡಿದ್ದರು. ಆದರೆ ಈ ಭಾಗದಲ್ಲಿನ ಕೆಲವರು ಸೀಲ್‌ಡೌನ್‌ ಆದೇಶ ಇದ್ದರೂ ಅಂಗಡಿ ತೆರೆದು ವ್ಯಾಪಾರ ಮಾಡಿದರು.

ಶನಿವಾರ ಎಂದಿನಂತೆ ಸಾರ್ವಜನಿಕರು ಹಾಲು, ದಿನಸಿ, ತರಕಾರಿ ಖರೀದಿಸಲು ಮನೆ ಯಿಂದ ಹೊರಬಂದರು. ಬಿಬಿಎಂಪಿ ಉಚಿತ ವಾಗಿ ವಿತರಿಸುವ ಹಾಲಿಗಾಗಿ ಬೆಳಗ್ಗೆ ಜನ ಗುಂಪು ಸೇರುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಅಗತ್ಯ ಸೇವೆ ನೀಡಿಲ್ಲ: ಆರೋಪ
ಈ ಎರಡು ವಾರ್ಡ್‌ಗಳಲ್ಲಿ ನೆಲೆಸಿರುವವರಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಬಿಬಿಎಂಪಿ ಯಾವುದೇ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿಲ್ಲ. ಏಕಾಏಕಿ ಸೀಲ್‌ಡೌನ್‌ನಿಂದಾಗಿ ತೀವ್ರ ಸಮಸ್ಯೆಯಾಗುತ್ತಿದೆ. ನೆರವಿಗೆ ಯಾರೂ ಬರುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next