Advertisement
ಅವರು ಬುಧವಾರ ಬ್ರಹ್ಮಾವರ ತಹ ಶೀಲ್ದಾರ್ ಕಚೇರಿಯಲ್ಲಿ ಬ್ರಹ್ಮಾವರ ತಾಲೂಕು ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರಿಗೂ ಜಾಗದ ಹಕ್ಕು ಪತ್ರ ನೀಡುವ ಕೆಲಸ ಹೋರಾಟ ರೂಪದಲ್ಲಿ ನಡೆಯಬೇಕು ಎಂದರು. ಪರಂಬೋಕು, ಗೋಮಾಳ, ಮೂಲಗೇಣಿ ಇತ್ಯಾದಿ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು, ಧಾರ್ಮಿಕ ಕೇಂದ್ರಗಳ ಹಕ್ಕುಪತ್ರ ಕುರಿತು ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಸರಕಾರಿ ಅಧಿಕಾರಿಗಳು ಪುಣ್ಯ ಸಂಪಾದನೆಗಾಗಿ ಯಾವ ಕ್ಷೇತ್ರಕ್ಕೂ ಹೋಗಬೇಕಿಲ್ಲ. ಕಚೇರಿಗೆ ಬಂದ ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡುವುದೇ ಪುಣ್ಯದ ಕೆಲಸ ಎಂದು ಕಾಗೋಡು ಹೇಳಿದರು. ಮಿನಿ ವಿಧಾನಸೌಧ
ತಾಲೂಕು ಕೇಂದ್ರ ಬ್ರಹ್ಮಾವರಕ್ಕೆ 10 ಕೋ.ರೂ. ಅನುದಾನದ ಮಿನಿವಿಧಾನ ಸೌಧ ಮಂಜೂರು ಮಾಡಬೇಕೆಂದು ಮನವಿ ಮಾಡಿದ ಸಚಿವ ಪ್ರಮೋದ್ ಅವರು ಜಿಲ್ಲೆಯ ಕಂದಾಯ ಸಂಬಂಧಿ ಸಮಸ್ಯೆಗಳನ್ನು ಪ್ರಸ್ತಾವನೆಯಲ್ಲಿ ತಿಳಿಸಿದರು.
Related Articles
ತಹಶೀಲ್ದಾರ್ ಪ್ರದೀಪ್ ಎಸ್. ಕುಡೇìಕರ್ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
Advertisement
ವಿವಿಧ ಭಾಗ್ಯಗಳ ಸವಲತ್ತು ವಿತರಣೆಪಶು ಭಾಗ್ಯ ಯೋಜನೆ-3, ಹಾಲು ಉತ್ಪಾದಕರ ಪ್ರೋತ್ಸಾಹ ಧನ-20, ಬಿದಾಯಿ ಯೋಜನೆ-3, ಸಮುದಾಯ ಭವನ ನಿರ್ಮಾಣಕ್ಕೆ ಸಹಾಯಧನ ವಿತರಣೆ, ಧಾರ್ಮಿಕ ದತ್ತಿ ಇಲಾಖೆಯ ಅನುದಾನ ವಿತರಣೆ, ಉದ್ಯೋಗಿನಿ ಯೋಜನೆ-6, ವಸತಿ ಯೋಜನೆ ಮನೆ ಮಂಜೂರಾತಿ-20, ಸಂಧ್ಯಾ ಸುರಕ್ಷಾ-76, ವಿಧವಾ ವೇತನ-35, ಅಂಗವಿಕಲ ವೇತನ-6, ಮನಸ್ವಿನಿ- 5, ವೃದ್ಧಾಪ್ಯ ವೇತನ-6, 94ಸಿ ಮತ್ತು 94ಸಿಸಿ ಹಕ್ಕುಪತ್ರ-67, ಮುಖ್ಯ ಮಂತ್ರಿ ಪರಿಹಾರ ನಿಧಿ ಚೆಕ್-3, ಪ್ರಾಕೃತಿಕ ವಿಕೋಪ ನಿಧಿ-1 ಸಹಿತ ನೂರಾರು ಮಂದಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.