Advertisement
ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಬರಪೀಡಿತ ತಾಲೂಕು ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಅಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿ ಅವರು ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು.
Related Articles
Advertisement
ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್ ಮೂಲಕ ಪೂರೈಸಲು ಪ್ರತೀ ತಾಲೂಕು ಪಂಚಾಯತ್ಗೆ 10 ಲಕ್ಷ ರೂ. ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ 5 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಶಾಸಕ ಮೊದಿನ್ ಬಾವ ಉಪಸ್ಥಿತರಿದ್ದರು.
ಕುಡಿಯುವ ನೀರು: 933 ಹೊಸ ಕಾಮಗಾರಿ- 19 ಕೋ.ರೂ. ಪ್ರಸ್ತಾವನೆಡಾ| ಎಂ.ಆರ್. ರವಿ ಮಾತನಾಡಿ, ಕುಡಿಯುವ ನೀರಿಗೆ ಸಂಬಂಧಪಟ್ಟು ಜಿಲ್ಲೆಯಲ್ಲಿ 933 ಹೊಸ ಕಾಮಗಾರಿಗಳನ್ನು ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಂತೆ ಮಂಗಳೂರಿನಲ್ಲಿ 280, ಬಂಟ್ವಾಳ 348, ಪುತ್ತೂರು 79, ಸುಳ್ಯ 87 ಹಾಗೂ ಬೆಳ್ತಂಗಡಿಯಲ್ಲಿ 139 ಕಾಮಗಾರಿ ಕೈಗೊಳ್ಳಬಹುದು. ಇದಕ್ಕಾಗಿ ಒಟ್ಟು 19 ಕೋ. ರೂ. ಪ್ರಸ್ತಾವನೆ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗುವುದು. ಬರಪೀಡಿತ ಮಂಗಳೂರು ತಾಲೂಕಿನ 19 ಕೆರೆ ಹಾಗೂ ಬಂಟ್ವಾಳ ತಾಲೂಕಿನ 42 ಕೆರೆಗಳನ್ನು ಒಟ್ಟು 13 ಲಕ್ಷ ರೂ.ಗಳಲ್ಲಿ ಪುನಶ್ಚೇತನ ಕೈಗೊಳ್ಳಲು ನಿರ್ಧರಿಸಧಿಲಾಗಿದೆ ಎಂದರು. ತುಂಬೆ 6 ಮೀ. ನೀರು ನಿಲುಗಡೆ; ಬಜೆಟ್ನಲ್ಲಿ ಅನುದಾನ ನಿರೀಕ್ಷೆ
ಸಚಿವ ರಮಾನಾಥ ರೈ ಮಾತನಾಡಿ, ತುಂಬೆ ವೆಂಟೆಡ್ ಡ್ಯಾಂನಲ್ಲಿ ಈಗಾಗಲೇ 5 ಮೀಟರ್ ನೀರು ನಿಲ್ಲಿಸಲಾಗಿದ್ದು, 8 ಮೀಟರ್ ವರೆಗೆ ನೀರು ನಿಲ್ಲಿಸಲು ಅವಕಾಶವಿದೆ. ಆದರೆ ನಮ್ಮ ಅಗತ್ಯಕ್ಕೆ ಅನುಗುಣವಾಗಿ 6 ಮೀಟರ್ನಷ್ಟು ನೀರು ನಿಲುಗಡೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಮತ್ತೆ ಭೂಮಿ ಮುಳುಗಡೆಯಾಗುವುದರಿಂದ ಮುಂದಿನ ಬಜೆಟ್ನಲ್ಲಿ ಇದಕ್ಕಾಗಿ 32 ಕೋ. ರೂ. ಅನುದಾನ ಸಿಗುವ ಸಾಧ್ಯತೆ ಇದೆ. ಇದರ ಪ್ರಕಟನೆ ಆದ ಬಳಿಕ 6 ಮೀಟರ್ ನೀರು ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮಕ್ಕೊಂದು ವೆಂಟೆಡ್ ಡ್ಯಾಂ…!
ದ.ಕ. ಜಿ. ಪಂ. ಸಿಇಒ ಡಾ| ಎಂ.ಆರ್. ರವಿ ಮಾತನಾಡಿ, 1 ಗ್ರಾಮಕ್ಕೆ ಕನಿಷ್ಠ 1 ವೆಂಟೆಡ್ ಡ್ಯಾಂ ಸೌಲಭ್ಯ ನೀಡುವ ಮೂಲಕ ಆ ಗ್ರಾಮದಲ್ಲಿ ನೀರಿನ ಸಂಗ್ರಹಕ್ಕೆ ಒತ್ತು ನೀಡುವ ಹೊಸ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಗ್ರಾಮದಲ್ಲಿ ಗರಿಷ್ಠ 5 ವೆಂಟೆಡ್ ಡ್ಯಾಂ ಕಟ್ಟಬಹುದು. ನರೇಗಾ ಯೋಜನೆಯಡಿ ಇದರ ಕಾಮಗಾರಿ ನಡೆಸಬೇಕು. 1 ಡ್ಯಾಂಗೆ 2.30 ಲಕ್ಷ ರೂ. ವೆಚ್ಚ ಎಂದು ಮಾದರಿ ಕ್ರಿಯಾಯೋಜನೆಯಲ್ಲಿ ಅಂದಾಜಿಸಲಾಗಿದೆ. ಇದನ್ನು ಸರಕಾರದ ಒಪ್ಪಿಗೆಗಾಗಿ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.