Advertisement

ಕುಲಾಂತರಿ ಸಾಸಿವೆ ಬಿಡುಗಡೆ ಬಗ್ಗೆ ನೀತಿ ರೂಪಿಸಿಲ್ಲ: ಕೇಂದ್ರ

03:50 AM Jul 18, 2017 | Team Udayavani |

ಹೊಸದಿಲ್ಲಿ: ಕುಲಾಂತರಿ ಸಾಸಿವೆ ತಳಿಯ ವಾಣಿಜ್ಯ ಉದ್ದೇಶದ ಬಿಡುಗಡೆ ಕುರಿತು ನೀತಿ ರೂಪಿಸುವ ಯಾವುದೇ ನಿರ್ಧಾರವನ್ನು ಈವರೆಗೆ ಕೈಗೊಂಡಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

Advertisement

ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೆಹರ್‌ ಹಾಗೂ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿದ್ದ ನ್ಯಾಯ ಪೀಠಕ್ಕೆ ಮಾಹಿತಿ ನೀಡಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಶಾರ್‌ ಮೆಹ್ತಾ, “ಕುಲಾಂತರಿ ಸಾಸಿವೆ ತಳಿಯ ವಾಣಿಜ್ಯ ಬಿಡುಗಡೆ ಕುರಿತಂತೆ ಕೇಂದ್ರ ಅಗತ್ಯ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಿದೆ’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಾಸಿವೆ ತಳಿ ಬಿಡುಗಡೆ ಸಂಬಂಧ “ಸದುದ್ದೇಶದಿಂದ ಕೂಡಿರುವ ಹಾಗೂ ಸಂಪೂರ್ಣ ಮಾಹಿತಿ ಒಳಗೊಂಡ’ ನೀತಿಯನ್ನು ಎಂದು ಹೊರತರಲಾಗುತ್ತದೆ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಒಂದು ವಾರ ಗಡುವು ನೀಡಿತು. ಕುಲಾಂತರಿ ಸಾಸಿವೆ ತಳಿಯ ವಾಣಿಜ್ಯ ಬಿಡುಗಡೆಗೆ ಇದ್ದ ತಡೆಯಾಜ್ಞೆಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ಸುಪ್ರೀಂ ಕೋರ್ಟ್‌ ಕಳೆದ ಅ.17ರಂದು ಆದೇಶ ಹೊರಡಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next