Advertisement

ಈರುಳ್ಳಿ ವಾಸನೆಗೆ ನಿಲ್ದಾಣಕ್ಕೆ ಹಿಂದಿರುಗಿದ ವಿಮಾನ !

08:44 PM Aug 03, 2023 | Team Udayavani |

ತಿರುವನಂತಪುರಂ: ಕೇರಳದ ಕೊಚ್ಚಿಯಿಂದ ಯುಎಇಯ ಶಾರ್ಜಾಗೆ ತೆರಳುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನವೊಂದು ಈರುಳ್ಳಿಯ ದುರ್ವಾಸನೆಯಿಂದಾಗಿ ಮತ್ತೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹಿಂದಿರುಗಿರುವ ಘಟನೆ ವರದಿಯಾಗಿದೆ! 175 ಪ್ರಯಾಣಿಕರಿದ್ದ ವಿಮಾನದಲ್ಲಿ ಟೇಕಾಫ್ ಆದ ಕೆಲವೇ ಸಮಯದೊಳಗೆ ಏನೋ ಸುಟ್ಟಿರುವಂಥ ಕೆಟ್ಟ ವಾಸನೆ ವರದಿಯಾಗಿದೆ.

Advertisement

ಇದರಿಂದ ಪ್ರಯಾಣಿಕರು ಗಾಬರಿಗೊಂಡ ಕಾರಣ ಪೈಲಟ್‌ ಕೊಚ್ಚಿಗೆ ವಾಪಸಾಗಿದ್ದಾರೆ. ಲ್ಯಾಂಡಿಂಗ್‌ ಬಳಿಕ ವಿಮಾನ ಪರಿಶೀಲಿಸಿದಾಗ ಯಾವುದೇ ತಾಂತ್ರಿಕ ದೋಷ ಕಂಡು ಬಂದಿಲ್ಲ, ಬದಲಾಗಿ ಸರಕು ಸರಂಜಾಮು ಭಾಗದಲ್ಲಿದ್ದ ಈರುಳ್ಳಿ, ತರಕಾರಿಗಳಿಂದ ಆ ರೀತಿಯ ವಾಸನೆ ಬಂದಿದೆ ಎಂಬುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next