Advertisement

ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!

07:58 PM Jul 18, 2021 | Team Udayavani |

ಮನಸ್ಸು ಎಂದರೆ ಗ್ರಹಿಕೆ, ಯೋಚನೆ, ವಿವೇಚನೆ  ಶಕ್ತಿಗಳ ಸಮೂಹ. ನಮಗೆ ಅರಿವಾಗದಂತೆಯೇ ನಮ್ಮ ಮನಸ್ಸು ಒಮ್ಮೊಮ್ಮೆ ಹತೋಟಿ ತಪ್ಪುತ್ತಿರುತ್ತದೆ. ನಮ್ಮ ಆಲೋಚನೆಗಳನ್ನು ಎಲ್ಲೋ ಸೆಳೆದೊಯ್ಯೊತ್ತದೆ. ಕೆಲವು ಸಂದರ್ಭಗಳಲ್ಲಿ ಈ ಆಲೋಚನೆಗಳೂ ಸ್ಥಿರವಾಗಿ ಇರುವುದಿಲ್ಲ. ಮನಸ್ಸು ಚಂಚಲ.  ಎಲ್ಲವೂ ಸಂಶಯಮಯವೆನಿಸುತ್ತದೆ. ಒಮ್ಮೊಮ್ಮೆ ಮನಸ್ಸು ಗೊಂದಲ ಹಾಗೂ ಚಂಚಲಗಳಿಂದಲೇ ಕೂಡಿ ಇರುತ್ತದೆ ಅನ್ನಿಸುತ್ತದೆ.  ನಮ್ಮಲ್ಲೊಂದು ಅಂತರ್ಗತ ಪ್ರಪಂಚವಿದೆ. ಕಾಲ, ಸ್ಥಿತಿ, ಸಂಬಂದಗಳನ್ನು ಆಧರಿಸಿ ಮನಸ್ಸಿನ ಅಂತರಂಗ ಸಹಜವಾಗಿ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳುತ್ತಿರುತ್ತದೆ.

Advertisement

ಕೋಪ, ಪ್ರೇಮ, ದ್ವೇಷ, ಭಯ, ದುಃಖ, ಕಳವಳ, ಅಭದ್ರತಾಭಾವನೆ ಇವೆಲ್ಲವೂ ಹುಟ್ಟಿಕೊಳ್ಳಲು ನಮ್ಮ ಮನಸ್ಸಿನ ಅಂತರಂಗದಲ್ಲಿ ಆಗುವ ಬದಲಾವಣೆಗಳೇ ಕಾರಣ. ಅದರಿಂದಾಗಿ ನಮ್ಮ ಅಂತರಂಗವು ಒಮ್ಮೊಮ್ಮೆ ಕಳವಳಕಾರಿಯ ರೀತಿಯಲ್ಲಿರುತ್ತದೆ. ಈ ಭಾವನೆ ಮತ್ತು ವಿಪರೀತವೆನಿಸುವ ಲಕ್ಷಣಗಳನ್ನು ಸಹಜ ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವ ನೈಪುಣ್ಯತೆ ವರ್ತಮಾನ ಪ್ರಪಂಚಕ್ಕೆ ತುಂಬಾ ಅವಶ್ಯಕ. ನಾವು ಸದಾ ಅಂತರಂಗದತ್ತ ದೃಷ್ಟಿ ಹಾಯಿಸಬೇಕು. ನಮಗೆ ನಾವೇ ಮಥಿಸಿಕೊಳ್ಳಬೇಕು. ನಕಾರಾತ್ಮಕ ಚಿಂತನೆಯನ್ನು ಬಿಟ್ಟು ಸಕಾರಾತ್ಮಕ ಧೋರಣೆಯಲ್ಲಿ ನಮ್ಮ ಆಲೋಚನೆಗಳು ಸಾಗಬೇಕು. ಜೀವನದ ಬಗೆಗಿನ ಅಭದ್ರತಾ ಭಾವನೆಯನ್ನು ದೂರಮಾಡುವ ಕುರಿತಾದ ಮಾರ್ಗಗಳನ್ನು ತಿಳಿದುಕೊಳ್ಳಬೇಕು.

ಇದನ್ನೂ ಓದಿ : ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಆರ್ ಅಶೋಕ್

ಜೀವನದ ಕೆಲವು ಘಟ್ಟಗಳಲ್ಲಿ ನಾವು ನಮ್ಮ ಶಿಕ್ಷಣ, ನಮ್ಮ ಕೆರಿಯರ್, ಉದ್ಯೋಗ, ಸಂಬಂಧ, ಅನುಬಂಧ, ಇಂತಹ ವಿಷಯಗಳ ಕುರಿತಾಗಿ ಅಭದ್ರತೆಗೆ ಒಳಗಾಗುದುಂಟು. ನಿರೀಕ್ಷಿಸಿದ್ದು ಕೈ ಸೇರಲಿಲ್ಲ, ಸಂಬಂಧಗಳು ಕಡಿದು ಹೋಗುತ್ತಿವೆಯೇನೋ…. ಇಂತಹ  ಭೀತಿ ಭ್ರಾಂತಿಗೊಳಗಾಗುತ್ತೇವೆ.

ಇದೊಂದು ಸಹಜ ಪ್ರಕ್ರಿಯೆ ಎಂಬುದು ನಿಪುಣರ ಅನಿಸಿಕೆಯಾಗಿದೆ. ಆದರೆ ವಿಚಿತ್ರವೆಂದರೆ ಯಾವುದೇ ಭಯ, ಕಳವಳ ಇಲ್ಲದೆ ಸಹಜವಾಗಿ ಸಾಗುತ್ತಿರುವ ಸಂದರ್ಭಗಳಲ್ಲೇ ನಾವು ಅಭದ್ರತೆಯ ಭಾವದಿಂದ ವ್ಯಾಕುಲರಾಗಿರುತ್ತೇವೆ. ಏನೇನನ್ನೋ ಊಹಿಸಿಕೊಳ್ಳುತ್ತೇವೆ.

Advertisement

ನಿಜವಾಗಿಯೂ ಅಭದ್ರತೆಗೆ ಕಾರಣವಾಗುವ ವಿಷಯಗಳ ಬಗ್ಗೆ ಸ್ಪಂದಿಸುವುದಿಲ್ಲ. ಅಭದ್ರತೆಯ ಬಗ್ಗೆ ನಮ್ಮ ಮನಸ್ಸಿನಲ್ಲಿ ಅನಗತ್ಯವಾಗಿ ಕಾಡುವ ಅನುಮಾನಗಳು, ಹಲವು ಸಂದರ್ಭಗಳಲ್ಲಿ ಮಿತಿ ಮೀರುತ್ತವೆ. ನಿಮಗಿಷ್ಟವಾದವರು ನಿಮ್ಮಿಂದ ದೂರವಾಗಿ ಮತ್ಯಾರನ್ನೋ ಪ್ರೇಮಿಸುತ್ತಿದ್ದಾರೆಂದು, ಅವರ ಬೆನ್ನಹಿಂದೆ ಸುತ್ತುತ್ತಿದ್ದಾರೆಂದು, ನಿಮಗಿಂತಲೂ ಸಮರ್ಥನಾದ ವ್ಯಕ್ತಿಯಹುಡುಕಾಟದಲ್ಲಿದ್ದಾರೆಂದು, ನಿಮ್ಮ ಸ್ಥಾನದಲ್ಲಿ ಇನ್ನೋಬ್ಬರಿಗೆ ಅವಕಾಶ ಕೊಡುತ್ತಾರೇನೋ ಎಂಬಂತಹ ಸಂಗತಿಗಳು ನಿಮ್ಮಲ್ಲಿನ ಅಭದ್ರತೆಯ ಭಾವವನ್ನು ಪುಟಿದೆಬ್ಬಿಸುತ್ತದೆ.

ಅಭದ್ರತೆ ಎಂಬುದು ಒಂದು ಭಾವೋದ್ವೇಗದ ಅಲಾರಂ. ಗಡಿಯಾರದಂತೆ. ಸ್ನೇಹಿತರು ಅತಿ ಕಡಿಮೆ ಸಮಯವನ್ನು ನಿಮ್ಮೊಂದಿಗೆ ಕಳೆದಾಗ, ಅಕ್ಕ ಪಕ್ಕದ ಸಹೋದ್ಯೋಗಿಗಳು ನಿಮಗಿಂತಲೂ ಎಲ್ಲ ವಿಧದಲ್ಲೂ ಚೆನ್ನಾಗಿದ್ದರೂ ನಿಮ್ಮಲ್ಲಿನ ಈ ಗಡಿಯಾರವು ಅತ್ತಿಂದಿತ್ತ ಚಲಿಸಲು ಪ್ರಾರಂಭಿಸುತ್ತದೆ.

ಇತಂಹ ಅಭದ್ರತಾ ಭಾವವು ಮನೆ ಮಾಡಿಕೊಳ್ಳಲಿಕ್ಕೆ, ಅದು ಇನ್ನಷ್ಟು ವೃದ್ಧಿಯಾಗಲು ಆತ್ಮವಿಶ್ವಾಸದ ಕೊರತೆಯೇ ಪ್ರಮುಖ ಕಾರಣವಾಗಿರುತ್ತದೆ. ಜೀವನವೆಂದರೆ ಅಭದ್ರತೆಯಿಂದ ಬದುಕುವುದಲ್ಲ. ಸದಾ ನಮ್ಮ ಅಂತರಂಗದ ಮಥನ ಮಾಡಿ ಕೊಳ್ಳಬೇಕು. ನಾವು ಆಳವಾಗಿ ದೃಷ್ಟಿಹಾಯಿಸಿದರೆ ಪ್ರತಿಯೊಂದು ಆನಂದದ ಹಿಂದೆ ಒಂದು ವಿಷಾದ, ಪ್ರತಿಯೊಂದು ವಿಷಾದದ ಪಕ್ಕದಲ್ಲೇ ಒಂದು ಆನಂದ ಇರುತ್ತದೆ. ಇದು ನಿಜವಾದ ಜೀವನ ಎಂಬುದರ ಅರಿವು ಇರಲಿ.

                                                                       ಪ್ರಥ್ವಿನಿ ಡಿಸೋಜ, ಅಲಂಗಾರ್

ಆಳ್ವಾಸ್ ಕಾಲೇಜು, ಮೂಡುಬಿದಿರೆ

ಇದನ್ನೂ ಓದಿ : ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಆರ್ ಅಶೋಕ್

Advertisement

Udayavani is now on Telegram. Click here to join our channel and stay updated with the latest news.

Next