Advertisement

ಕಂಬನಿ ಮಿಡಿದ ಜೇವರ್ಗಿ ಜನತೆ

10:49 AM Aug 18, 2018 | Team Udayavani |

ಕಲಬುರಗಿ: ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ನಿಧನಕ್ಕೆ ಜೇವರ್ಗಿ ತಾಲೂಕಾ ಭಾರತೀಯ ಜನತಾ ಪಕ್ಷದ ಘಟಕ ಕಂಬನಿ ಮಿಡಿದಿದ್ದು, ಜೇವರ್ಗಿ ಬಿಜೆಪಿ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ವಾಜಪೇಯಿ ಅವರನ್ನು ಕಳೆದುಕೊಂಡಿದ್ದರಿಂದ ದೇಶವಲ್ಲದೇ ಜಗತ್ತೇ ಇಂದು ಶೋಕಾಸಾಗರದಲ್ಲಿ ಮುಳುಗಿದೆ ಎಂದರು.

ನಂತರ ಅಖಂಡೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಮೌನ ಆಚರಿಸಲಾಯಿತು. ಬಿಜೆಪಿ ತಾಲೂಕು ಅಧ್ಯಕ್ಷ ಸಾಯಬಣ್ಣ ದೊಡ್ಮನಿ, ಹಿರಿಯ ಮುಖಂಡರಾದ ರಮೇಶ ಬಾಬು ವಕೀಲ, ಷಣ್ಮುಖಪ್ಪ ಸಾಹು ಹೋಗಿ, ಬಸವರಾಜ ಕಂದಗಲ್‌, ಬಸವರಾಜ ಪಾಟೀಲ ನರಿಬೋಳ, ವಿರೇಶ ಪಾಟೀಲ ನರಿಬೋಳ, ಗುರುರಾಜ ಸುಬೇದಾರ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next