Advertisement

ಮತದಾರರು ಕೈಬಿಟ್ರೂ ಪಕ್ಷ ನನ್ನನ್ನು ಕಾಪಾಡಿದೆ

11:39 PM Aug 21, 2019 | Team Udayavani |

ಬೆಳಗಾವಿ: ಸಚಿವ ಸ್ಥಾನ ಬಯಸದೇ ಬಂದ ಭಾಗ್ಯ. ಶಾಸಕನಲ್ಲದಿದ್ದರೂ ಪಕ್ಷದ ವರಿಷ್ಠರು ನಂಬಿಕೆ ಇಟ್ಟು ಸಚಿವರನ್ನಾಗಿ ಮಾಡಿದ್ದಾರೆ. ಈ ನಂಬಿಕೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತೇನೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹರ ಮುನಿದರೆ ಗುರು ಕಾಯುತ್ತಾನೆ ಎಂಬಂತೆ ಮತದಾರರು ಹರ ಇದ್ದಂತೆ. ಅವರು ಮುನಿದರೂ ಗುರುವಿನ ಸ್ಥಾನದಲ್ಲಿ ಪಕ್ಷವು ನನ್ನನ್ನು ಕಾಪಾಡಿದೆ ಎಂದು ಮಾರ್ಮಿಕವಾಗಿ ಹೇಳಿದರು.

Advertisement

ಸಚಿವ ಸ್ಥಾನಕ್ಕೆ ತಮ್ಮ ಪರ ರಮೇಶ ಜಾರಕಿಹೊಳಿ ಲಾಬಿ ಮಾಡಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, “ನನ್ನ ಪರ ಯಾರು ಲಾಬಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಪ್ರಮಾಣ ವಚನ ಸ್ವೀಕಾರದ ಹಿಂದಿನ ದಿನ ಮಧ್ಯರಾತ್ರಿ ಎರಡು ಗಂಟೆಗೆ ನನಗೆ ಕರೆ ಬಂತು. ನಿಮ್ಮ ಹೆಸರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿಗೆ ಬನ್ನಿ ಎಂದು ಹೇಳಿದರು. ಅದರಂತೆ ನಾನು ಸಚಿವ ಸ್ಥಾನ ವಹಿಸಿಕೊಂಡೆ. ಇದರಲ್ಲಿ ಯಾರ ಲಾಬಿ ಇದೆ ಎಂಬುದು ಗೊತ್ತಿಲ್ಲ. ಪಕ್ಷದ ಮೇಲಿನ ನಿಷ್ಠೆ ನನಗೆ ಈ ಸ್ಥಾನ ನೀಡಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next