Advertisement

ಗಿಣಿ ಕಥೆ ಕೇಳಿದ ಧ್ರುವಸರ್ಜಾ

11:35 AM Dec 12, 2018 | Team Udayavani |

ಬಹುತೇಕ ರಂಗಭೂಮಿ ಕಲಾವಿದರೇ ಸೇರಿ ಮಾಡಿರುವ ‘ಗಿಣಿ ಹೇಳಿದ ಕಥೆ’ ಚಿತ್ರಕ್ಕೆ ನಟ ಧ್ರುವಸರ್ಜಾ ಸಾಥ್‌ ನೀಡಿದ್ದಾರೆ. ಇತ್ತೀಚೆಗೆ  ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಬುದ್ಧ ಚಿತ್ರಾಲಯ ಬ್ಯಾನರ್‌ನಲ್ಲಿ ದೇವರಾಜು ನಿರ್ಮಿಸಿರುವ ‘ಗಿಣಿ ಹೇಳಿದ ಕಥೆ’ ಚಿತ್ರಕ್ಕೆ ನಾಗರಾಜು ಉಪ್ಪುಂದ ಅವರು ನಿರ್ದೇಶಕರು.

Advertisement

ಛಾಯಾಗ್ರಹಣ ಕೂಡ ಅವರದೇ. ಇನ್ನು, ಇತ್ತೀಚೆಗೆ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್‌ ನೀಡಿದೆ. ಹಿತನ್‌ ಹಾಸನ್‌ ಚಿತ್ರಕ್ಕೆ ಸಂಗೀತ ನೀಡಿದರೆ, ದೇವ್‌ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಜಾಗ್ವಾರ್‌ ಸಣ್ಣಪ್ಪ ಸಾಹಸವಿದೆ. ರವಿಚಂದ್ರ ಕುಮಾರ್‌ ಅವರ ಸಂಕಲನವಿದೆ.  

ಚಿತ್ರದಲ್ಲಿ ದೇವ್‌, ಗೀತಾಂಜಲಿ, ಮಾಲತೇಶ್‌, ನೀತುರಾಯ್‌, ಹಾವೇರಿ ಶ್ರೀಧರ್‌, ಮಹಾಂತೇಶ್‌ ಸೇರಿದಂತೆ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಅಮದಹಾಗೆ, “ಗಿಣಿ ಹೇಳಿದ ಕಥೆ’ ಒಂದು ಟ್ಯಾಕ್ಸಿ ಡ್ರೈವರ್‌ ಒಬ್ಬನ ಪ್ರಯಾಣದಲ್ಲಿ ನಡೆಯುವ ಕಥೆ. ಚಿತ್ರದಲ್ಲಿ 5 ಹಾಡುಗಳಿದ್ದು, ಬೆಂಗಳೂರು, ಮೈಸೂರು , ಮಡಿಕೇರಿ, ದಕ್ಷಿಣ ಕನ್ನಡ ಸೇರಿದಂತೆ ಇತರೆಡೆ ಚಿತ್ರೀಕರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next