Advertisement

ಮಹಾಮೈತ್ರಿಕೂಟಕ್ಕೆ ಮೋದಿ ದ್ವೇಷವೇ ಅಜೆಂಡಾ: ಪ್ರಧಾನಿ

08:56 AM Jul 04, 2018 | Team Udayavani |

ನವದೆಹಲಿ: ತಮ್ಮ ವಿರುದ್ಧದ ದ್ವೇಷವೇ ಪ್ರತಿಪಕ್ಷಗಳ ಉದ್ದೇಶಿತ ಮೈತ್ರಿಕೂಟದ ಧ್ಯೇಯ. ಜತೆಗೆ ತಮ್ಮನ್ನು ತೆಗೆದುಹಾಕುವುದೇ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

Advertisement

“ಸ್ವರಾಜ್ಯ’ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 2014ರಲ್ಲಿ ದೇಶದ ಜನರು ಬಿಜೆಪಿ ಮೇಲೆ ಇರಿಸಿರುವ ವಿಶ್ವಾಸವನ್ನು 2019ರ ಚುನಾವಣೆಯಲ್ಲೂ ಮುಂದುವರಿಸುವ ಭರವಸೆ ತಮಗಿದೆ ಎಂದು ಹೇಳಿದ್ದಾರೆ. 

ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್‌ ಈಗ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ ಎಂದು ಲೇವಡಿ ಮಾಡಿದ್ದಾರೆ. 

ವಿಧಾನಸಭೆ, ಲೋಕಸಭೆಗೆ ಏಕಕಾಲದ ಚುನಾವಣೆ ನಡೆಸುವ ಪ್ರಸ್ತಾಪ ತಮ್ಮದಲ್ಲ. ಹಲವಾರು ಮಂದಿ ಈ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು ಎಂದೂ ಹೇಳಿದ್ದಾರೆ. ತಮ್ಮ ವೈಯಕ್ತಿಕ ಭದ್ರತೆ ವೃದ್ಧಿಸಿರುವ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, “ಜನರ ಜತೆ ಮಾತನಾಡಲು ಬಯಸುವಾತ ನಾನು. ಹೊರತು ನಿರಂಕುಶಾಧಿಕಾರಿಯಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next