Advertisement

ಅಪಘಾತ ತಡೆಗೆ ಸಂಚಾರ ನಿಯಮ ಪಾಲನೆ ಮುಖ್ಯ

03:47 PM Mar 21, 2017 | |

ಹುಬ್ಬಳ್ಳಿ: ವಿಶ್ವದಲ್ಲಿ ರಸ್ತೆ ಅಪಘಾತದಿಂದಾಗಿಯೇ ಪ್ರತಿ ಮೂರು ನಿಮಿಷಕ್ಕೊಂದು ಜೀವ ಹೋಗುತ್ತಿದೆ. ಅಪಘಾತ ತಪ್ಪಿಸಲು ಪ್ರತಿಯೊಬ್ಬರು ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ ಎಂದು ನರರೋಗ ತಜ್ಞ ಡಾ| ಕ್ರಾಂತಿ ಕಿರಣ ಹೇಳಿದರು. 

Advertisement

ನ್ಯೂಕಾಟನ್‌ ಮಾರ್ಕೆಟ್‌ನ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮೀಷ°ರೇಟ್‌ ಹಾಗೂ ಶ್ರೀ ಬಾಲಾಜಿ ಇನ್‌ಸ್ಟಿಟೂಟ್‌ ಆಫ್‌ ನ್ಯೂರೋ ಸಾಯನ್ಸ್‌ ಆ್ಯಂಡ್‌ ಟ್ರಾಮಾ ಸೆಂಟರ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಲೆಪೆಟ್ಟು ಜಾಗೃತಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ರಸ್ತೆ ಅಪಘಾತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ 20ರಿಂದ 40 ವಯಸ್ಸಿನವರು ಸಾಯುತ್ತಿದ್ದಾರೆ. ಇದರಲ್ಲಿ ಬಹುತೇಕರು ದ್ವಿಚಕ್ರ ವಾಹನ ಸವಾರರಾಗಿದ್ದಾರೆ. ಜಗತ್ತಿನಲ್ಲಿ ಪ್ರತಿ ವರ್ಷ 14 ಲಕ್ಷ ಜನ ಸಾವನ್ನಪಿದ್ದರೆ, ಪ್ರತಿದಿನ 4500, ಪ್ರತಿ ಗಂಟೆಗೆ 200 ಜನರ ಪ್ರಾಣಪಕ್ಷಿ ಹಾರಿ ಹೋಗುತ್ತಿದೆ. ದೇಶದಲ್ಲಿ ನಿಮಿಷಕ್ಕೆ ಒಬ್ಬರು ಸಾಯುತ್ತಿದ್ದಾರೆ.

2016ರಲ್ಲಿ ದೇಶದಲ್ಲಿ 1.60 ಸಾವಿರ ಸಾವಿಗೀಡಾದರೆ, ರಾಜ್ಯದಲ್ಲಿ 12 ಸಾವಿರ ಜನರು ಮೃತಪಟ್ಟಿದ್ದಾರೆ. ವಿಶ್ವದಲ್ಲಿ ಭಾರತವು ಶೇ. 3ರಷ್ಟು ವಾಹನಗಳನ್ನು ಬಳಸಿದರೆ, ಅಪಘಾತದಲ್ಲಿ ಸಾಯುವರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು. ಹು-ಧಾ ಪೊಲೀಸ್‌ ಆಯುಕ್ತ ಪಾಂಡುರಂಗ ರಾಣೆ ಮಾತನಾಡಿ, ರಸ್ತೆ ಅಪಘಾತಗಳಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ಇದರಲ್ಲಿ ಬಹುತೇಕರು ದ್ವಿಚಕ್ರ ವಾಹನ ಸವಾರರಾಗಿದ್ದಾರೆ. ಇದಕ್ಕೆ ಹೆಲ್ಮೆಟ್‌ ಬಳಸದಿರುವುದು ಮತ್ತು ನಿಯಮ ಉಲ್ಲಂ ಸುತ್ತಿರುವುದು ಪ್ರಮುಖ ಕಾರಣವಾಗಿದೆ. ಅಜಾಗರೂಕತೆಯಿಂದಲೇ ಅನಾಹುತಗಳು  ನಡೆಯುತ್ತಿವೆ. ಥ್ರಿಲ್‌ ಮಾಡಿದರೆ ಕಿಲ್‌ ಆಗುವುದು ಗ್ಯಾರಂಟಿ. ಆದ್ದರಿಂದ ಪೊಲೀಸರು ಒತ್ತಾಯಿಸಿದ್ದಾರೆಂದು ಕಾಟಾಚಾರಕ್ಕೆಂಬಂತೆ ಹೆಲ್ಮೆಟ್‌ ಧರಿಸುವ ಬದಲು ಐಎಸ್‌ಐ ಮಾರ್ಕ್‌ನ ಗುಣಮಟ್ಟದ ಹೆಲ್ಮೆಟ್‌ ಧರಿಸಿ ಜೀವ ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು. 

Advertisement

ಕಾನೂನು ವಿಶ್ವವಿದ್ಯಾಲಯದ ಕುಲಸಚಿವ ಸಿ.ಎಸ್‌. ಪಾಟೀಲ ಮಾತನಾಡಿ, ವಿದೇಶಗಳಲ್ಲಿ ರಸ್ತೆ ಅಪಘಾತಗಳಲ್ಲಿ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ಕೊಡಿಸುವ ಬದಲು ವಿಡಿಯೋ ಮಾಡಿಕೊಳ್ಳುತ್ತಿರುವುದು ಕಂಡು ಬಂದರೆ ಶಿಕ್ಷೆ ವಿಧಿಸುವ ಕಾನೂನುವಿದೆ. ಆದರೆ ಭಾರತದಲ್ಲಿ ಈ ಕಾನೂನನ್ನು ಇನ್ನು ಮಾಡಿಲ್ಲ.

ಪಾಲಕರೂ ಸಹಿತ ಮಕ್ಕಳು ಪ್ರೌಢಾವಸ್ಥೆಗೆ ಬರುವವರೆಗೂ ಅವರಿಗೆ ವಾಹನ ಚಲಾಯಿಸಲು ಬಿಡಬಾರದು ಎಂದರು. ಎಸ್‌ಡಿಎಂ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ| ನಿರಂಜನ, ಕಿಮ್ಸ್‌ ನಿರ್ದೇಶಕ ಡಾ| ದತ್ತಾತ್ರೇಯ ಬಂಟ್‌, ಡಿಸಿಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next